Advertisement

ಅಂಬಾನಿ ಪುತ್ರ ಬಂದೇ ಬಿಟ್ಟ

09:57 AM Mar 07, 2020 | mahesh |

ಅಂಬಾನಿ ಪುತ್ರ
– ಹೀಗೆಂದಾಕ್ಷಣ ನಿಮಗೆ ಅಂಬಾನಿ ಫ್ಯಾಮಿಲಿ ನೆನಪಿಗೆ ಬರಬಹುದು. ಅವರೇನಾದರೂ ಕನ್ನಡದಲ್ಲಿ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರಾ ಎಂದು ನೀವು ಕೇಳಬಹುದು. ಖಂಡಿತಾ ಇಲ್ಲ, ಆ ಅಂಬಾನಿಗೂ ಇಲ್ಲಿನ ಅಂಬಾನಿಗೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣ ಹೊಸಬರೇ ಸೇರಿಕೊಂಡು ಮಾಡಿರುವ ಸಿನಿಮಾ- “ಅಂಬಾನಿ ಪುತ್ರ’. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇದೊಂದು ಕಾಮಿಡಿ ಸಿನಿಮಾ. ಚಂಚಲ ಮನಸ್ಸುಳ್ಳ ಶ್ರೀಮಂತ ಹುಡುಗನೊಬ್ಬನ ಕಥೆಯನ್ನು ಇಲ್ಲಿ ಹೇಳಲಾಗಿದೆ. ಈ ಚಿತ್ರಕ್ಕೆ “ಓದಿರೋದು ಕಾ… ಸೂತ್ರ’ ಎಂಬ ಟ್ಯಾಗ್‌ಲೈನ್‌ ಇದೆ. ಇದನ್ನು ನೀವು ಹೇಗಾದರೂ ಅರ್ಥ ಮಾಡಿಕೊಳ್ಳಬಹುದು. ದೊರೆ ರಾಜ್‌ ತೇಜ ಈ ಚಿತ್ರದ ನಿರ್ದೇಶಕರು. ಒಂದಷ್ಟು ನೈಜ ಅಂಶಗಳನ್ನು ಸೇರಿಸಿ ಈ ಸಿನಿಮಾ ಮಾಡಲಾಗಿದೆಯಂತೆ.

Advertisement

ಚಿತ್ರದಲ್ಲಿ ಸುಪ್ರೀಂ ನಾಯಕರಾಗಿ ನಟಿಸಿದ್ದಾರೆ. ಅವರಿಗೆ ಹೊಸ ಅನುಭವ. ಈ ಸಿನಿಮಾ ಮೂಲಕ ಚಿತ್ರರಂಗದಲ್ಲಿ ನೆಲೆ ನಿಲ್ಲುವ ವಿಶ್ವಾಸ ಅವರದು. “ಸಾಕಷ್ಟು ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಚೆನ್ನಾಗಿ ಮೂಡಿಬಂದಿದೆ. ಹೊಸಬರು ಗೆಲ್ಲಬೇಕಾದರೆ ಎಲ್ಲರ ಸಹಕಾರ ಮುಖ್ಯ’ ಎಂದಷ್ಟೇ ಹೇಳಿದರು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಆಶಾ ಭಂಡಾರಿ ಹಾಗೂ ಕಾವ್ಯಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

ಮಧುದೇವಲಾಪುರು, ರೋಹಿತ್‌ ಆದಿತ್ಯ ಹಾಗೂ ನಿರ್ದೇಶಕರು ಬರೆದಿರುವ ಐದು ಹಾಡುಗಳಿಗೆ ಅಭಿಷೇಕ್‌ ರಾಯ್‌ ಸಂಗೀತ ನೀಡಿದ್ದಾರೆ. ಚಿತ್ರವನ್ನು ವೆಂಕಟೇಶ್‌ ಹಾಗೂ ವರುಣ್‌ ಸೇರಿ ನಿರ್ಮಿಸಿದ್ದಾರೆ. ಚಿತ್ರವನ್ನು ಹಾಸನ, ಮಂಡ್ಯ, ಹೊನ್ನಾವರ, ಮಹಾರಾಷ್ಟ್ರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ ವಿ.ರಾಮಾಂಜನೇಯ ಛಾಯಾಗ್ರಹಣ, ಹೈಟ್‌ ಮಂಜು ನೃತ್ಯವಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next