Advertisement

ಇಂದಿನಿಂದ ಹೊಸಬರ ವೇಷ

10:09 AM Jan 04, 2020 | mahesh |

ಹೊಸಬರ ತಂಡವೊಂದು ಸದ್ದಿಲ್ಲದೇ ಸಿನಿಮಾ ಮಾಡಿ ಮುಗಿಸಿದೆ. ಅದು “ವೇಷಧಾರಿ’. ಹೀಗೊಂದು ಶೀರ್ಷಿಕೆ ಇರುವ ಸಿನಿಮಾ ಆರಂಭವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಇಂದು (ಜ.03) ರಂದು ತೆರೆಕಾಣುತ್ತಿದೆ. ಅರಿಷಡ್ವರ್ಗಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಮನುಷ್ಯನಿಗೆ ಅರಿಷಡ್ವರ್ಗಗಳನ್ನು ಮೆಟ್ಟಿನಿಲ್ಲುವ ತಾಕತ್ತು ಇದೆಯಾ, ಒಂದು ವೇಳೆ ನಿಲ್ಲಬಹುದಾದರೆ ಅದು ಹೇಗೆ ಎಂಬ ಅಂಶದ ಜೊತೆಗೆ ಮನುಷ್ಯ ಬಯಸಿದ್ದೆಲ್ಲವೂ ಸುಲಭವಾಗಿ ಸಿಕ್ಕಿದರೆ ಅವನು ಏನು ಮಾಡಬಹುದು ಎಂಬ ಅಂಶವನ್ನು ಸೇರಿಸಿ ಈ ಸಿನಿಮಾ ಮಾಡಲಾಗಿದೆಯಂತೆ. ಶಿವಾನಂದ.ಬಿ.ಭೂಷಿ ರಚನೆ, ಚಿತ್ರಕತೆ ಸಂಭಾಷಣೆ, ಸಾಹಿತ್ಯ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಾಮಾಜಿಕ ವಿಡಂಬನೆ ಮಾಡಲಾಗಿದೆಯಂತೆ. ಹುಡುಗನೊಬ್ಬ ತನ್ನ ಆಸೆಯನ್ನು ತೀರಿಸಿಕೊಳ್ಳಲು ನಾನಾ ವೇಷಗಳನ್ನು ಹಾಕುತ್ತಾನೆ. ಆದರೆ ಏನೇ ಮಾಡಿದರೂ ಆತನ ಆಸೆ ಈಡೇರುವುದಿಲ್ಲ. ಕೊನೆಗೆ ಜಿಗುಪ್ಸೆ ಹೊಂದಿ ಎಲ್ಲವನ್ನು ತ್ಯಜಿಸಲು ಮುಂದಾಗುತ್ತಾನೆ. ಈ ವೇಳೆ ಒಂದು ಘಟನೆ ನಡೆಯುತ್ತದೆ. ಆ ನಂತರ ಏನಾಗುತ್ತದೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ.

Advertisement

ಚಿತ್ರದಲ್ಲಿ ಆರ್ಯನ್‌ ನಾಯಕರಾಗಿ ನಟಿಸಿದ್ದಾರೆ. ಹಳ್ಳಿ ಹುಡುಗನಾಗಿ ಆಸೆಗಳ ಹಿಂದೆ ಬಿದ್ದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾನೆ ಎಂಬ ಪಾತ್ರ ಸಿಕ್ಕಿದೆಯಂತೆ. ಶೃತಿ ರಾಜೇಂದ್ರ ಹಳ್ಳಿ ಹುಡುಗಿಯಾಗಿ ನಟಿಸಿದರೆ, ಶಾಸಕರ ಮಗಳಾಗಿ ದರ್ಪ ತೋರಿಸುವ ಪಾತ್ರದಲ್ಲಿ ಸೋನಂ ರೈ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿರಾದಾರ್‌, ಮೈಕೆಲ್‌ ಮಧು, ಮೋಹನ್‌ ಜುನೇಜ, ಮಿಮಿಕ್ರಿ ಗೋಪಿ, ಕುರಿರಂಗ ನಟಿಸಿದ್ದಾರೆ. ಚಿತ್ರಕ್ಕೆ ಬೆಂಗಳೂರು, ಹೊಸಕೋಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ, ಬೆಳಗಾವಿ, ಹುಕ್ಕೇರಿ, ಗೋಕಾಕ್‌, ಚಿಕ್ಕಮಗಳೂರು ಹಾಗೂ ಬಂಡಿಪುರ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಎಸ್‌.ಎನ್‌.ವೀರಣ್ಣ, ಅನಿಲ್‌.ಹೆಚ್‌.ಅಂಬಿ ಮತ್ತು ಹೆಚ್‌.ಕೆ.ಫ್ರೆಂಡ್ಸ್‌ ಸಹಯೋಗದಲ್ಲಿ ಶ್ರೀ ಸಾಯಿಭಗವಾನ್‌ ಕಂಬೈನ್ಸ್‌ನಡಿ ಈ ಚಿತ್ರ ತಯಾರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next