Advertisement

ನವಜಾತ ಶಿಶುವನ್ನುಬಾಣಲೆಯಲ್ಲಿ ಹಾಕಿ ಯಮುನಾ ನದಿಯಲ್ಲಿ ತೇಲಿ ಬಿಟ್ಟ ಕ್ರೂರಿಗಳು..!

01:29 PM May 07, 2021 | Team Udayavani |

ಮಥುರಾ : ನವಜಾತ ಶಿಶುವೊಂದನ್ನು ಬಾಣಲೆಯಲ್ಲಿ ಹಾಕಿ ಯಮುನಾ ನದಿಯಲ್ಲಿ ತೇಲಿ ಬಿಟ್ಟಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಸ್ಥಳೀಯರು ಈ ಮಾಹಿತಿಯನ್ನ ಪೊಲೀಸರಿಗೆ ತಿಳಿಸಿದ ಮೇಲೆ ಮಗುವನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮಥುರಾ ಪೊಲೀಸರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, ಮಗುವನ್ನು ಸರ್ಕಾರಿ ಆಸ್ಪತ್ರೆಯ ಮಕ್ಕಳ ವಿಭಾಗಕ್ಕೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಮನೋಜ್ ಶರ್ಮಾ ಅವರು ಕಬ್ಬಿಣದ ಬಾಣಲೆಯಲ್ಲಿದ್ದ ಮಗುವನ್ನು ಹೊರಗೆ ತೆಗೆದುಕೊಂಡು ಆಸ್ಪತ್ರೆಗೆ ಕರೆದೊಯ್ದರು. ಆ ಮಗುವನ್ನು ಬಿಳಿ ಬಿಟ್ಟೆಯಿಂದ ಕಟ್ಟಿ ಬಾಣಲೆಯಲ್ಲಿ ಹಾಕಲಾಗಿತ್ತು. ಮಗು ಅಳುತ್ತಿದ್ದನ್ನು ನೋಡಿದ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಅದೃಷ್ಟವಶಾತ್ ಬಾಣಲೆಯು ಮಗುಚಿಕೊಂಡಿಲ್ಲ. ಹಾಗೇನಾದರೂ ಆಗಿದ್ದರೆ ಮಗುವು ನೀರಿನಲ್ಲಿ ಮುಳುಗುತ್ತಿತ್ತು ಎಂದಿದ್ದಾರೆ.  ಸದ್ಯ ಆ ಮಗುವಿನ ಪೋಷಕರ ಪತ್ತೆಗಾಗಿ ಕಾರ್ಯಾಚರಣೆ ಮಾಡಲಾಗಿದೆ. ಆ ಮಗುವನ್ನು ಯಾರೂ ದತ್ತು ಪಡೆಯಲು ಮುಂದೆ ಬರದಿದ್ದರೆ, ಜಿಲ್ಲಾಡಳಿತದ ಅನುಮತಿ ಮೇರೆಗೆ ನಾನೇ ಸಾಕುತ್ತೇನೆ ಎಂದು ಹಿಂದೂಸ್ತಾನಿ ಬಿರಾದಾರಿ ಉಪಾಧ್ಯಕ್ಷ ವಿಶಾಲ್ ಶರ್ಮಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next