Advertisement

ವಚನ ಪಠಣದೊಂದಿಗೆ ಹೊಸ ವರ್ಷಾಚರಣೆ

11:15 AM Jan 02, 2020 | Suhan S |

ಕೂಡಲಸಂಗಮ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಸವಣ್ಣವರ ಐಕ್ಯ ಮಂಟಪದ ಪ್ರವೇಶ ದ್ವಾರದಲ್ಲಿ ವಚನ ಪಠಣದೊಂದಿಗೆ ನೂತನ ವರ್ಷವನ್ನು ಸ್ವಾಗತಿಸಿದರು.

Advertisement

ರಾತ್ರಿ 11:50ಕ್ಕೆ ವಿಶೇಷ ಲಿಂಗ ಪೂಜೆ ಮಾಡುತ್ತ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಮಂತ್ರ ಪಠಣ ಮಾಡುತ್ತ ಕಳೆದ ವರ್ಷದ ಒಳ್ಳೆಯ ಕಾರ್ಯ ಸ್ಮರಣೆ ಮಾಡುತ್ತ ಕೆಟ್ಟ ಕಾರ್ಯ ಮರೆಯುವಂತೆ ಹೇಳಿ ಧ್ಯಾನದಲ್ಲಿ ತಲ್ಲಿನರಾಗುವಂತೆ ಮಾಡಿದರು.

ಮಧ್ಯರಾತ್ರಿ 1ಗಂಟೆಗೆ ಬಸವಣ್ಣವರ ಐಕ್ಯ ಮಂಟಪ ಪ್ರವೇಶ ದ್ವಾರದಲ್ಲಿ ಬಸವಣ್ಣನ ಪುತ್ಥಳಿ ಎದುರು ವಚನ ಪಠಣ ಮಾಡಿದ ನಂತರ ಹೊಸ ವರ್ಷ ದೇಶ ಅಭಿವೃದ್ದಿ ಹೊಂದಲಿ, ಸಮಾಜದಲ್ಲಿ ಎಲ್ಲರು ಸಾಮರಸ್ಯದಿಂದ ಬದುಕಬೇಕು. ದೇಶದ ಬೆನ್ನೆಲುಬಾದ ರೈತನಿಗೆ ಆರೋಗ್ಯ ಸಂಪತ್ತು, ಉತ್ತಮ ಬೆಳೆ ದೊರೆಯಲಿ ಎಂದು ಹೇಳಿದರು. ಸೊಲ್ಲಾಪುರ ಕಿರೀಟ ಮಠದ ಸ್ವಾಮೀನಾಥ ಸ್ವಾಮೀಜಿ, ಕತಾರ ದೇಶದ ಶಶಿಧರ ಹೆಬ್ಟಾಳ, ಬಾಲ ನಟಿ ಬೇಬಿ ಅಮೂಲ್ಯ, ಕೂಡಲಸಂಗಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶೇಖರಗೌಡ ಗೌಡರ, ಆದಪ್ಪ ಗೊರಚಿಕ್ಕನವರ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next