Advertisement

ಕೇತೇಶ್ವರ ಮಹಾಮಠಕ್ಕೆ ನೂತನ ಸ್ವಾಮೀಜಿ 

01:47 AM Jan 21, 2019 | |

ದಾವಣಗೆರೆ: ಚಿತ್ರದುರ್ಗದ ಶ್ರೀ ಕೇತೇಶ್ವರ ಮಹಾಮಠದ ನೂತನ ಪೀಠಾಧಿಪತಿಗಳಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಶ್ರೀ ಭಾನುವಾರ ದೀಕ್ಷೆ ಸೀÌಕರಿಸಿದರು. ಮೇದಾರಸಮುದಾಯದ ಕುಲಗುರುಗಳನ್ನಾಗಿ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿಗೆ ಶ್ರೀ ಶಿವ ಮೂರ್ತಿ ಮುರುಘಾ ಶರಣರು ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಭಾನುವಾರ ನಡೆದ ಸಹಜ ಶಿವ ಯೋಗ ಕಾರ್ಯ ಕ್ರಮದಲ್ಲಿ ಲಿಂಗದೀಕ್ಷೆ ನೀಡಿದರು.

Advertisement

ಆರಂಭದಲ್ಲಿ ಶ್ರೀ ಶಿವಮೂರ್ತಿ ಮುರು ಘಾಶರಣರಿಗೆ ದೀರ್ಘ‌ದಂಡ ನಮಸ್ಕಾರ ಹಾಕಿದ ನೂತನ ಶ್ರೀಗಳು, ನನಗೆ ಕಾವಿ ದೀಕ್ಷೆ ಕೊಡಿ ಎಂದು ಕೇಳಿಕೊಂಡರು. ನಂತರ ಕಾವಿಧಾರಣೆ, ವಿಭೂತಿ ಧಾರಣೆ ನಡೆಯಿತು.

ಆಮೇಲೆ ಪ್ರಣವ ಸಂಬಂಧ, ಆಜ್ಞಾಚಕ್ರ ಉದ್ದೀಪನ, ಲಿಂಗದೀಕ್ಷೆ, ಮಂತ್ರೋಪದೇಶ, ಲಿಂಗಮಜ್ಜನ, ಶಿವಯೋಗದ ವಿಧಿವಿಧಾನಗಳನ್ನು ತಿಳಿಸಿ ದೀಕ್ಷಾ ಸಂಸ್ಕಾರ ನೀಡಿದರು. ಪೂಜಾ ಕಾರ್ಯಕ್ರಮಗಳ ಬಗ್ಗೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ನಿರೂಪಣೆ ಮಾಡಿದರು.

ದೀಕ್ಷೆ ಸ್ವೀಕರಿಸಿದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಮಾತನಾಡಿ, ಚಿತ್ರದುರ್ಗ ತಮ್ಮ ಊರಾಗಿದ್ದು, ತಂದೆ ಭರಮಪ್ಪ, ತಾಯಿ ಶಾಂತವ್ವ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ರಿಹೋಗಿದ್ದಾರೆ. ಈಗ ವಿರಕ್ತ ಮಠದಲ್ಲಿ ಇದ್ದುಕೊಂಡು ಬಿ.ಎ.ವ್ಯಾಸಂಗ ಮಾಡುತ್ತಿದ್ದು,ಮುಂದೆ ಬಸವತತ್ವ ಪ್ರಚಾರ ಮಾಡುವೆ ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next