Advertisement

ಉ.ಪ‹.ಸರಕಾರದ ಕೈಪಿಡಿಯಲ್ಲಿ ತಾಜ್‌ಮಹಲ್‌ ಮಾಯ

06:15 AM Oct 03, 2017 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ್‌ ನೇತೃತ್ವದ ಸರಕಾರ ಆರು ತಿಂಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕೈಪಿಡಿ ಬಿಡುಗಡೆ ಮಾಡಲಾಗಿದೆ. ಆದರೆ ಅದರಲ್ಲಿ ಪ್ರವಾಸಿ ತಾಣಗಳಿಗೆ ಸಂಬಂಧಿಸಿದ ವಿವರಣೆ ಯಲ್ಲಿ ಪ್ರೇಮಿಗಳ ಸೌಧ ತಾಜ್‌ಮಹಲ್‌ ಮಾಯವಾಗಿದೆ. ಆದರೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಗೋರಖ್‌ಪುರದ ದೇಗುಲಗಳ ಬಗೆಗಿನ ವಿವರ ನೀಡಲಾಗಿದೆ.

Advertisement

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಸಿದ್ಧಾರ್ಥ್ ನಾಥ್‌ ಸಿಂಗ್‌, ತಾಜ್‌ಮಹಲ್‌ ಅನ್ನು ಮರೆತಿಲ್ಲ. ಸಂಪರ್ಕದ ಕೊರತೆಯಿಂದ ಇಂಥ ಲೋಪ ಉಂಟಾಗಿದೆ. ಅದನ್ನು ಅವಗಣಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಕೈಪಿಡಿಯನ್ನು ಕೇವಲ ಪತ್ರಿಕಾಗೋಷ್ಠಿಯ ಉದ್ದೇಶದಿಂದ ಮಾತ್ರ ಬಿಡುಗಡೆ ಮಾಡಲಾ ಗಿದೆಯೇ ಹೊರತು, ಅದು ಪ್ರವಾಸಿಗರ ಗೈಡ್‌ ಅಲ್ಲ ಎಂದಿದ್ದಾರೆ. 32 ಪುಸ್ತಕದ ಕೈಪಿಡಿ ಯಲ್ಲಿ ಗಂಗಾ ಆರತಿ ಮತ್ತು ವಾರಾಣಸಿಯ ದೇಗುಲ ಮತ್ತು ಇತರ ಸ್ಥಳಗಳ ಬಗ್ಗೆ ವಿವರಣೆ ನೀಡಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next