Advertisement

ರೈಲು ಪ್ರಯಾಣಿಕರಿಗೆ ‘ವಿಶೇಷ’ಕೊಡುಗೆ ‘ವಿಕಲ್ಪ್’

12:38 PM Mar 24, 2017 | Karthik A |

ಹೊಸದಿಲ್ಲಿ: ನೀವು ಬೆಂಗಳೂರಿನಿಂದ ದೆಹಲಿಗೆ ಹೋಗಲು ಎಕ್ಸ್‌ಪ್ರೆಸ್‌ ರೈಲಿಗೆ ಮುಂಗಡ ಬುಕಿಂಗ್‌ ಮಾಡಿ, ವೇಯ್ಟಿಂಗ್‌ ಲಿಸ್ಟ್‌ನಲ್ಲಿ ಕಾಯುತ್ತಿದ್ದೀರಾ? ಹಾಗಾದರೆ ನಿಮಗೆ ಈಗ ರಾಜಧಾನಿ, ಶತಾಬ್ದಿ ಅಥವಾ ಇತರ ವಿಶೇಷ ರೈಲಿನಲ್ಲಿ ಸೀಟು ಸಿಗುವುದು ಗ್ಯಾರಂಟಿ. ಅದೂ ಕೂಡ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ! ಹೌದು, ಮುಂಗಡ ಟಿಕೆಟ್‌ ಕಾಯ್ದಿರಿಸುವ ರೈಲು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಮುಂದಾಗಿರುವ ರೈಲ್ವೇ ಇಲಾಖೆ, ಇದೇ ಎಪ್ರಿಲ್‌ 1ರಿಂದ ‘ವಿಕಲ್ಪ್’ ಎಂಬ ಹೊಸ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ.

Advertisement

ವಿಕಲ್ಪ್ ವ್ಯವಸ್ಥೆ ಅಡಿ ಇ-ಟಿಕೆಟ್‌ ಕಾಯ್ದಿರಿಸುವ ಪ್ರಯಾಣಿಕರು ವೇಯ್ಟಿಂಗ್‌ ಲಿಸ್ಟ್‌ನಲ್ಲಿದ್ದರೆ, ಅವರು ಹೋಗಬೇಕಿರುವ ಸ್ಥಳಕ್ಕೆ ತೆರಳುವ ಶತಾಬ್ದಿ, ಸುವಿಧಾ ರೀತಿಯ ವಿಶೇಷ ರೈಲುಗಳಲ್ಲಿ ಸೀಟು ಕೊಡಿಸಲಾಗುತ್ತದೆ. ಇದಕ್ಕೆ ಇಲಾಖೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯುವುದಿಲ್ಲ. ಈ ಸೌಲಭ್ಯ ಪಡೆಯಲು ಇ-ಟಿಕೆಟ್‌ ಬುಕ್‌ ಮಾಡುವುದು ಕಡ್ಡಾಯ. ಮೊದಲು ಬುಕ್‌ ಮಾಡಿದ ರೈಲಿನಲ್ಲಿ ಎಲ್ಲ ಸೀಟುಗಳು ತುಂಬಿದ ನಂತರವಷ್ಟೇ ವಿಶೇಷ ರೈಲುಗಳಲ್ಲಿ ಸೀಟು ನೀಡುವ ಪ್ರಕ್ರಿಯೆ ಆರಂಭವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next