Advertisement

ಮದುವೆಯಾದ ನಾಲ್ಕೇ ದಿನಕ್ಕೆ ಗಂಡನ ಮನೆಯಿಂದ ಹಣ, ಒಡವೆ ಕದ್ದು ಪರಾರಿಯಾದ ಯುವತಿ

09:59 AM Dec 16, 2019 | Mithun PG |

ಉತ್ತರಪ್ರದೇಶ: ನವವಿವಾಹಿತೆಯೊಬ್ಬಳು ಗಂಡನ ಮನೆಯವರಿಗೆ ಮತ್ತುಬರಿಸುವ ಊಟವನ್ನು ಉಣಬಡಿಸಿ ಆ ಬಳಿಕ ಹಣ ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾದ ವಿಚಿತ್ರ ಘಟನೆ ಬದೌನ್ ಜಿಲ್ಲೆಯ ಚೋಟಾ ಗ್ರಾಮದಲ್ಲಿ ನಡೆದಿದೆ.

Advertisement

ಮನೆಯವರು ನಿದ್ದೆಯಿಂದ ಎಚ್ಚೆತ್ತ ಬಳಿಕ ನವವಿವಾಹತೆ ಕಾಣೆಯಾಗಿದ್ದನ್ನು ಕಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾತ್ರವಲ್ಲದೆ ಚಿನ್ನಾಭರಣ ಮತ್ತು ನಗದು ಕೂಡ ಜೊತೆಗೆ ಕೊಂಡೊಯ್ದಿರುವುದನ್ನು ಕಂಡು ದಂಗಾಗಿದ್ದಾರೆ.

ಗಂಡನ ಮನೆಯಿಂದ ನಾಪತ್ತೆಯಾದವಳ ಹೆಸರನ್ನು ರಿಯಾ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 9 ರಂದು ಅಜಂಗಢದ ರಿಯಾ, ಬದೌನ್ ಗ್ರಾಮದ ಪ್ರವೀಣ್ ಅವರನ್ನು ಮದುವೆಯಾಗಿದ್ದಳು.  ಶುಕ್ರವಾರ ಸಂಜೆ ಮನೆಯವರಿಗೆಲ್ಲ ಪ್ರಜ್ಞೆ ತಪ್ಪುವ ಔಷಧವನ್ನು ಊಟದಲ್ಲಿ ಬೆರೆಸಿ ನೀಡಿದ್ದಾಳೆ. ಆ ಬಳಿಕ 70,000 ನಗದು ಮತ್ತು 3 ಲಕ್ಷ ಬೆಲೆಬಾಳುವ ಚಿನ್ನಾಭರಣದ ಜೊತೆ ಪರಾರಿಯಾಗಿದ್ದಾಳೆ. ವಿವಾಹ ನಡೆಯಲು ಕಾರಣವಾದ ಮದುವೆ ಏಜೆಂಟ್ ಟಿಂಕು ಎಂಬಾತನು ಕೂಡ ನಾಪತ್ತೆಯಾಗಿದ್ದಾನೆ.

ಈ ಕುರಿತು ಪ್ರವೀಣ್ ಮನೆಯವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮದುವೆಗಾಗಿ 4 ಲಕ್ಷ ರೂ ಖರ್ಚು ಮಾಡಿದ್ದು, ರಿಯಾ ಕುಟುಂಬಸ್ಥರು ಬಹಳ ಬಡವರಾಗಿದ್ದರಿಂದ ಚಿನ್ನಾಭರಣ ಕೊಳ್ಳಲು ಕೂಡ ಹಣವನ್ನು ನೀಡಿದ್ದೇವು. ಮದುವೆಗೆ ಟಿಂಕು ಎಂಬಾತ ಮಧ್ಯಸ್ಥಿಕೆ ವಹಿಸಿದ್ದು ಈತನೇ  ಖರ್ಚು ವೆಚ್ಚಗಳನ್ನು ನೋಡಿಕೊಂಡಿದ್ದರಿಂದ ಸಂಪೂರ್ಣ ಜವಬ್ದಾರಿಯನ್ನು ಆತನಿಗೆ ನೀಡಿದ್ದೇವು, ಆದರೆ ನಮಗೀಗ ಮೋಸ ಮಾಡಿದ್ದಾರೆ ಎಂದು ಪ್ರವೀಣ್ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next