Advertisement

ಹೊಸ ಜೋಶ್‌ನಲ್ಲಿ ಚಿತ್ರರಂಗ ಸಾಲು ಸಾಲು ಸಿನಿಮಾಗಳಿಗೆ ಪೂಜೆ

10:33 AM Jan 18, 2021 | Team Udayavani |

ಕೊರೊನಾ ಮಹಾಮಾರಿಯಿಂದ ನಲುಗಿ ಹೋಗಿದ್ದ ಕನ್ನಡ ಚಿತ್ರರಂಗ ಈಗ ಚೇತರಿಕೆ ಕಂಡಿದೆ. ಸಿನಿಮಾಗಳ ಬಿಡುಗಡೆ ಜೊತೆಗೆ ಸಾಕಷ್ಟು ಹೊಸ ಸಿನಿಮಾಗಳು ಕೂಡಾ ಸೆಟ್ಟೇರುತ್ತಿವೆ. ಹೊಸ ವರ್ಷ ತಮ್ಮ ಬಾಳಿನಲ್ಲಿ ಒಳ್ಳೆಯದ್ದನ್ನೇ ಮಾಡುತ್ತದೆ ಎಂಬ ನಂಬಿಕೆಯೊಂದಿಗೆ ಸಿನಿಮಾ ಮಂದಿ ಹೊಸ ಹೊಸ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

Advertisement

ಅದರ ಪರಿಣಾಮವಾಗಿಯೇ ಸಾಕಷ್ಟು ಹೊಸಬರ, ಸ್ಟಾರ್‌ಗಳ ಸಿನಿಮಾಗಳು ಮುಹೂರ್ತ ಆಚರಿಸಿಕೊಂಡಿವೆ. ಅದರಲ್ಲೂ ಸಂಕ್ರಾಂತಿಯ ನಂತರ ಸಾಕಷ್ಟು ಸಿನಿಮಾಗಳು ಸೆಟ್ಟೇರಿವೆ. ಬಹುಭಾಷಾ “ಸಲಾರ್‌’ ಹಾಗೂ ಅಭಿಷೇಕ್‌ ಅಂಬರೀಶ್‌ ಅವರ “ಬ್ಯಾಡ್‌ ಮ್ಯಾನರ್’ ಚಿತ್ರದ ಜೊತೆಗೆ ಇನ್ನೂ ಹಲವು ಚಿತ್ರಗಳು ಮುಹೂರ್ತ ಮಾಡಿಕೊಂಡು, ಚಿತ್ರೀಕರಣಕ್ಕೆ ಹೊರಟಿವೆ. ಆ ಚಿತ್ರಗಳು ಯಾವುವೆಂದು ನೋಡುವುದಾದರೆ…

ಲಂಕಾಸುರ

ವಿನೋದ್‌ ಪ್ರಭಾಕರ್‌ ನಾಯಕರಾಗಿರುವ “ಲಂಕಾಸುರ’ ಚಿತ್ರಕ್ಕೆ ದೊಡ್ಡಬಸ್ತಿಯ ಶ್ರೀಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಇತ್ತೀಚೆಗೆ ಮುಹೂರ್ತ ನಡೆಯಿತು. ಎ.ಎಂ.ಎಸ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಹೇಮಾವತಿ ಮುನಿಸ್ವಾಮಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.ನಿರ್ಮಾಪಕರ ಮಕ್ಕಳಾದ ಮಾಸ್ಟರ್‌ ಮಾನಸ್‌ ಪ್ರಜ್ವಲ್‌ ಹಾಗೂ ಶ್ರೇಯಸ್‌ ಪ್ರಜ್ವಲ್‌ ಕ್ಯಾಮೆರಾ ಚಾಲನೆ ಮಾಡಿದರು. ನಿರ್ದೇಶಕರ ಪುತ್ರ ಮಾಸ್ಟರ್‌ ಯೋಜಿತ್‌ ಆರಂಭ ಫ‌ಲಕ ತೋರಿದರು. ವಿನೋದ್‌ ಪ್ರಭಾಕರ್‌, ಲೂಸ್‌ ಮಾದ ಯೋಗಿ, ನಾಯಕಿ ಪಾರ್ವತಿ ಅರುಣ್‌, ಸಹಾನಾ ಗೌಡ ಹಾಗೂ ಅನೇಕ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಈ ಹಿಂದೆ ಮೂರ್ಕಲ್‌ ಎಸ್ಟೇಟ್‌ ಚಿತ್ರವನ್ನು ನಿರ್ದೇಶಿಸಿದ್ದ ಪ್ರಮೋದ್‌ ಕುಮಾರ್‌ ಲಂಕಾಸುರ ಚಿತ್ರದ ನಿರ್ದೇಶಕರು.

ಗಾಜನೂರು

Advertisement

ನವನಟ ಅವತಾರ್‌ ನಾಯಕ ನಟರಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ “ಗಾಜನೂರು’ ಚಿತ್ರ ಕೂಡಾ ಮುಹೂರ್ತ ಕಂಡಿದೆ. ಸಸ್ಪೆನ್ಸ್‌ ಕಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕೀರ್ತಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ ಎಸ್‌. ಮೋಹನ್‌, ನಂದಕಿಶೋರ್‌ ಮೊದಲಾದ ನಿರ್ದೇಶಕರ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ವಿಜಯ್‌ ಮೊದಲ ಬಾರಿಗೆ “ಗಾಜನೂರು’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಸೋನಾಲ್‌ ಮೊಂತೆರೋ ಈ ಚಿತ್ರದ ನಾಯಕಿ. ಗುಲಬರ್ಗಾ ಮೂಲದ ಅವಿನಾಶ್‌ “ಕೃತಿಕಾರಾಮ್‌ ಮೂವೀಸ್‌’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಶ್ರೀಧರ್‌ ವಿ. ಸಂಭ್ರಮ್‌ ಸಂಗೀತ ಸಂಯೋಜಿಸುತ್ತಿದ್ದಾರೆ.

ಇದನ್ನೂ ಓದಿ:ಫೆಬ್ರವರಿಯಲ್ಲೇ ಬರುತ್ತಂತೆ ಪೊಗರು!

ವೇಷ

ಸಂಪೂರ್ಣ ಹೊಸಬರೇ ಸೇರಿ ಮಾಡುತ್ತಿರುವ “ವೇಷ’ ಚಿತ್ರದ ಮುಹೂರ್ತ ಭಾನುವಾರ ನಡೆದಿದೆ. ರಘು ಈ ಚಿತ್ರದ ಮೂಲಕ ನಾಯಕ ನಟರಾಗಿ ಬಣ್ಣ ಹಚ್ಚುತ್ತಿದ್ದಾರೆ. ಪವನ್‌ ಕೃಷ್ಣ ಈ ಚಿತ್ರದ ನಿರ್ದೇಶಕರು. ಹಂಸಿನಿ ಕ್ರಿಯೇಶನ್ಸ್‌ ನಡಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ರಘು, ವಾಣಿಶ್ರೀ, ಮಂಜು ಪಾವಗಡ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.

ಓ ಮೈ ಲವ್‌

ಸ್ಮೈಲ್‌ ಶ್ರೀನು ನಿರ್ದೇಶನದ “ಓ ಮೈ ಲವ್‌’ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿದೆ. ಸಚಿವ ಶ್ರೀರಾಮುಲು ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್‌ ಮಾಡಿ, ಶುಭಕೋರಿದ್ದಾರೆ. ಈ ಚಿತ್ರವನ್ನು ರಾಮಾಂಜಿನಿ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ಶಶಿಕುಮಾರ್‌ ಪುತ್ರ ಅಕ್ಷಿತ್‌ ನಾಯಕರಾದರೆ, ಕೀರ್ತಿ ಈ ಚಿತ್ರದ ನಾಯಕಿ.

ಅವಸ್ಥಾಂತರ

ಸಂಚಾರಿ ವಿಜಯ್‌ ನಾಯಕರಾಗಿರುವ “ಅವಸ್ಥಾಂತರ’ ಚಿತ್ರವೂ ಸೆಟ್ಟೇರಿದೆ. ದೀಪಕ್‌ ಕುಮಾರ್‌ ಈ ಚಿತ್ರದ ನಿರ್ದೇಶಕರು. ರಂಜನಿ ರಾಘವನ್‌ ಹಾಗೂ ದಿಶಾ ಕೃಷ್ಣಯ್ಯ ಈ ಚಿತ್ರದ ನಾಯಕಿಯರು. ಇತ್ತೀಚೆಗೆ ಈ ಚಿತ್ರವೂ ಮುಹೂರ್ತ ಕಂಡಿದ್ದು, ಹೊಸ ಬಗೆಯ ಕಥೆಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next