Advertisement

ಗಣರಾಜ್ಯೋತ್ಸವಕ್ಕೆ ಹೊಸ ಅತಿಥಿ

12:35 AM Jan 11, 2021 | Team Udayavani |

ಹೊಸದಿಲ್ಲಿ: ಸುರಿನಾಮ್‌ ರಿಪಬ್ಲಿಕ್‌ನ ಅಧ್ಯಕ್ಷ, ಭಾರತೀಯ ಮೂಲದ ಚಂದ್ರಿಕಾಪ್ರಸಾದ್‌ ಸಂತೋಖೀ ಅವರು ಈ ಬಾರಿಯ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ರಾಜಪಥದಲ್ಲಿ ನಡೆಯುವ ಪರೇಡ್‌ನ‌ಲ್ಲಿ ಸಂತೋಖೀ ಪಾಲ್ಗೊಳ್ಳುವುದು ಬಹುತೇಕ ಖಚಿತ ಎಂದು ಪ್ರಧಾನಿ ಕಾರ್ಯಾಲಯದ ಮೂಲಗಳು ತಿಳಿಸಿವೆ.

Advertisement

ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರ ಭಾರತ ಭೇಟಿ ರದ್ದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬೋರಿಸ್‌ ಈ ಬಾರಿಯ ಗಣರಾಜ್ಯ ದಿನದ ಅತಿಥಿ ಎಂದು ಈ ಹಿಂದೆ ಘೋಷಿಸಲಾಗಿತ್ತು.

…………………………………………………………………

ದಿನಬಳಕೆ ವಸ್ತುಗಳ ಬೆಲೆಯೇರಿಕೆ? :

ಹೊಸದಿಲ್ಲಿ: ಹಣದುಬ್ಬರ ಏರಿಕೆಯ ಒತ್ತಡವನ್ನು ಅನುಭವಿಸುತ್ತಿರುವ ದಿನಬಳಕೆಯ ವಸ್ತುಗಳ ಉತ್ಪಾದಕ ಕಂಪೆನಿ (ಎಫ್ಎಂಸಿಜಿ)ಗಳು ತಮ್ಮ ಹೊರೆಯನ್ನು ಗ್ರಾಹಕರ ಹೆಗಲಿಗೆ ವರ್ಗಾಯಿಸಲು ನಿರ್ಧರಿಸಿದ್ದು, ಜನಸಾಮಾನ್ಯರು ಮುಂದಿನ ದಿನಗಳಲ್ಲಿ ಹೆಚ್ಚು ಹಣ ವ್ಯಯಿಸಬೇಕಾಗಿ ಬರುವ ಸಾಧ್ಯತೆಯಿದೆ. ಕಚ್ಚಾ ವಸ್ತುಗಳ ಬೆಲೆಯೇರಿಕೆಯನ್ನು ಸದ್ಯ ಈ ಕಂಪೆನಿಗಳು ತಾಳಿಕೊಂಡಿವೆ. ಆದರೆ ದೀರ್ಘ‌ಕಾಲಿಕವಾಗಿ ಇದು ಸಾಧ್ಯವಿಲ್ಲ. ಹಾಗಾಗಿ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳ ಸಂಭವನೀಯ ಎಂದು ಮಾರುಕಟ್ಟೆ ಮೂಲಗಳು ಪ್ರತಿಪಾದಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next