Advertisement

New Delhi ನವಜಾತ ಶಿಶು ಸಾವು ಪ್ರಕರಣ: ಲೆ| ಗ| ಸಕ್ಸೇನಾ ಆಕ್ರೋಶ

11:51 PM May 28, 2024 | |

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಆಸ್ಪ ತ್ರೆಯಲ್ಲಿ 7 ನವಜಾತ ಶಿಶುಗಳು ಅಸುನೀಗಿದ ಪ್ರಕರ ಣದಲ್ಲಿ ಆಪ್‌ ಸರಕಾರದ ಪ್ರತಿಕ್ರಿಯೆ ತೃಪ್ತಿಕರವಾಗಿಲ್ಲ ಎಂದು ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಆರೋಪಿಸಿದ್ದಾರೆ.

Advertisement

ದಿಲ್ಲಿ ಸಿಎಂ ಕೇಜ್ರಿವಾಲ್‌, ಸಚಿವ ಸೌರಭ್‌ ಭಾರದ್ವಜ್‌ ಕೇವಲ ಮಾಧ್ಯಮಗಳ ಮುಂದೆ ಮಾತನಾಡುತ್ತಾರೆ. ನೊಂದ ಕುಟುಂಬಗಳಿಗೆ ಸರಿಯಾದ ಪರಿಹಾರ ನೀಡಿಲ್ಲ ಎಂದು ಟೀಕಿಸಿದರು. ಹೊಸದಿಲ್ಲಿಯಲ್ಲಿರುವ ನರ್ಸಿಂಗ್‌ ಹೋಮ್‌ ಹಾಗೂ ಕ್ಲಿನಿಕ್‌ಗಳ ನೋಂದಣಿ ಮತ್ತು ನಿಯಂತ್ರಣ ನಿರ್ವಹಣೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಸಾರ್ವ ಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊ ಳ್ಳಲಾಗಿದೆ ಎಂದು ಸಮರ್ಥನೆ ನೀಡಿದ್ದಾರೆ. ಲೆಫ್ಟಿನೆಂಟ್‌ ಗವರ್ನರ್‌ ಮಾಡಿರುವ ಆರೋಪಗಳ ಬಗ್ಗೆ ಆಪ್‌ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next