Advertisement

ಹಂಸಲೇಖ- ಬರಗೂರು ಹೊಸ ಅಧ್ಯಾಯ

04:35 AM Jun 05, 2020 | Lakshmi GovindaRaj |

ಕೋವಿಡ್‌ 19 ಕುರಿತಾಗಿ ಈಗಾಗಲೇ ಸಾಕಷ್ಟು ಹಾಡುಗಳು, ಕಿರುಚಿತ್ರಗಳು ಬಂದಿವೆ. ಈ ಸಾಲಿಗೆ ಈಗ ಹೊಸದಾಗಿ ಮತ್ತೂಂದು ಆಲ್ಬಂ ಸೇರಿಕೊಳ್ಳುತ್ತಿದೆ. ಅದೇ ಹೊಸ ಅಧ್ಯಾಯ. ಹೌದು. ಹೊಸ ಅಧ್ಯಾಯ ಎಂಬ ಆಲ್ಬಂ ಒಂದು  ಬಿಡುಗಡೆಯಾಗಿದೆ. ಈ ಆಲ್ಬಂನ ಹಿಂದಿರೋದು ಕನ್ನಡ ಚಿತ್ರರಂಗದ ಇಬ್ಬರು ಹಿರಿಯ ವ್ಯಕ್ತಿಗಳು.

Advertisement

ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿ ಹೊಸ ಅಧ್ಯಾಯ ಎಂಬ ಕೋವಿಡ್‌ 19  ಕುರಿತಾದ ಆಲ್ಬಂ ಹೊರತಂದಿದ್ದಾರೆ. ದೇಶ ವಿದೇಶದ ಸಂಚಾರಿ ಕಣ್ಣಿಗೆ ಕಾಣದ ಸಂಹಾರಿ, ಅಂಟಿದ ನಂಟನು ತಂದವನು ಜೀವ ಜೀವನ ಕೊಂದವನು… ಎಂಬ ಅರ್ಥಪೂರ್ಣ ಸಾಲನ್ನು ಬರಗೂರು ರಾಮಚಂದ್ರಪ್ಪನವರು ರಚಿಸಿದ್ದು,

ಈ  ಹಾಡಿಗೆ ಹಂಸಲೇಖ ಅವರು ಧ್ವನಿ ನೀಡುವ ಜೊತೆಗೆ ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಈ ಹಾಡಿನಲ್ಲಿ ಕೋವಿಡ್‌ 19 ಪರಿಣಾಮ ಹಾಗೂ ಅದನ್ನು ಹಿಮ್ಮೆಟ್ಟಿಸುವ ಕುರಿತಾದ ಭರವಸೆಯನ್ನು ತುಂಬಲಾಗಿದೆ. ವಿಶ್ವಾಸ್‌ ಎನ್ನುವವರು ಈ  ಹಾಡನ್ನು ಚಿತ್ರೀಕರಿಸಿದ್ದಾರೆ. ಈಗಾಗಲೇ ಹಂಸಲೇಖ ಹಾಗೂ ಅವರ ಕುಟುಂಬ ಕೋವಿಡ್‌ 19 ಕುರಿತು ತಮ್ಮದೇ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next