Advertisement

ಶಿವಸೇನೆ ಎಂದಿಗೂ ಹಿಂದುತ್ವ ಬಿಡಲ್ಲ, ಬಿಡಲ್ಲ!: ಸಿಎಂ ಉದ್ಧವ್‌

03:55 PM Dec 02, 2019 | Hari Prasad |

ಮುಂಬಯಿ: ಎನ್‌ಸಿಪಿ, ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಸರಕಾರ ಸ್ಥಾಪನೆ ಬಳಿಕ ಶಿವಸೇನೆ ಹಿಂದುತ್ವವನ್ನು ಕೈಬಿಟ್ಟಿದೆ ಎಂಬ ಮಾತಿಗೆ ಇದೀಗ ಶಿವಸೇನೆ ಮುಖ್ಯಸ್ಥ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ. ಶಿವಸೇನೆ ಎಂದಿಗೂ ಹಿಂದುತ್ವ ಬಿಡುವುದಿಲ್ಲ ಎಂದಿದ್ದಾರೆ.

Advertisement

ನಾನು ಇನ್ನೂ ಹಿಂದುತ್ವ ಸಿದ್ಧಾಂತವನ್ನು ನಂಬಿಕೊಂಡಿದ್ದೇನೆ. ಅದನ್ನು ಎಂದಿಗೂ ಯಾವತ್ತಿಗೂ ಬಿಡುವುದಿಲ್ಲ ಎಂದು ವಿಧಾನ ಸಭೆಯಲ್ಲೇ ಹೇಳಿದ್ದಾರೆ. ಇದಕ್ಕೆ ಉದ್ಧವ್‌ ಕಾಲೆಳೆದ ವಿಪಕ್ಷ ನಾಯಕ ದೇವೇಂದ್ರ ಫ‌ಡ್ನವೀಸ್‌ ಅವರು ಶಿವಸೇನೆ ಹಿಂದುತ್ವ ಈಗ ಕಾಂಗ್ರೆಸ್‌ನ ಸೋನಿಯಾ ಗಾಂಧಿಯವರ ಕಾಲು ಹಿಡಿದಿದೆ ಎಂದು ಕಿಚಾಯಿಸಿದರು.

ಇದೇ ವೇಳೆ ಫ‌ಡ್ನಿವೀಸ್‌ ಕುರಿತಾಗಿ ಹೇಳಿದ ಉದ್ಧವ್‌, ನಾನು ಫ‌ಡ್ನವೀಸ್‌ ಅವರಿಂದ ಬಹಳಷ್ಟನ್ನು ಕಲಿತಿದ್ದೇನೆ. ಹಿಂದಿನ ಸರಕಾರ ಇರುವಾಗ ಯಾವುದೇ ದ್ರೋಹ ಬಗೆದಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next