Advertisement

ಮರು ಪರಿಶೀಲನೆ ಹಿಂದೆ ನಡೆದೇ ಇಲ್ಲ

08:35 AM May 07, 2018 | Team Udayavani |

ಹೊಸದಿಲ್ಲಿ /ಕೊಚ್ಚಿ: ಸುಪ್ರೀಂಕೋರ್ಟ್‌ ಗೆ ತಮ್ಮ ಹೆಸರನ್ನು ಕೊಲೀಜಿಯಂ ಶಿಫಾರಸು ಮಾಡಿದ್ದರೂ ಅದನ್ನು ಕೇಂದ್ರ ಸರಕಾರ ಪುನರ್‌ ಪರಿಶೀಲಿಸುವಂತೆ ಕೇಳಿರುವುದು ಹಿಂದೆಂದೂ ನಡೆಯದೇ ಇದ್ದ ವಿಚಾರ. ಹೀಗೆಂದು ಉತ್ತರಾಖಂಡ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡಲು ನನಗೆ ಸಾಧ್ಯವಾಗದು. ಕೊಲೀಜಿಯಂ (ನ್ಯಾಯಮೂರ್ತಿಗಳ ಸಮಿತಿ) ಶೀಘ್ರದಲ್ಲಿಯೇ ಮತ್ತೂಂದು ಸಭೆ ನಡೆಸಲಿದೆ ಎಂದು  ನ್ಯಾ.ಜೋಸೆಫ್ ತಿಳಿಸಿದ್ದಾರೆ. ಕೊಚ್ಚಿಯಲ್ಲಿ ಮಾತನಾಡಿದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ನ್ಯಾ.ಕುರಿಯನ್‌ ಜೋಸೆಫ್ ಈ ರೀತಿ ಹಿಂದಿನ ದಿನಗಳಲ್ಲಿ ಆಗಿರಲಿಲ್ಲ. ಈ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆಯಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next