Advertisement

ಅಧಿಕಾರದ ಹಿಂದೆ ಎಂದೂ ಹೋಗುವುದಿಲ್ಲ: ಅಂಗಾರ

12:21 AM Aug 03, 2019 | mahesh |

ಸುಬ್ರಹ್ಮಣ್ಯ : ಸುಳ್ಯದ ಶಾಸಕ ಎಸ್‌. ಅಂಗಾರ ಅವರು ಶುಕ್ರವಾರ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಗೆ ಭೇಟಿ ನೀಡಿದರು.

Advertisement

ಬಿಜೆಪಿ ಕಾರ್ಯಕರ್ತರ ಭೇಟಿಗೆಂದು ಆಗಮಿಸಿದ್ದ ಅವರು ಈ ವೇಳೆ ಶಾಲೆಗೆ ತೆರಳಿ, ಶಾಲೆಯ ಕುಂದು ಕೊರತೆ ಬಗ್ಗೆ ಮಾಹಿತಿ ಪಡೆದರು. ಶಾಲೆಯ ಅಭಿವೃದ್ಧಿ ಬಗ್ಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹೆತ್ತವರ ಜತೆಗೆ ಚರ್ಚಿಸಿದರು. ಬಳಿಕ ಶಾಲಾ ಮಕ್ಕಳ ಜತೆ ಕುಶಲೋಪರಿ ನಡೆಸಿದರು.

ಭೇಟಿ ವೇಳೆ ಅವರು ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಮಂತ್ರಿ ಆಗುವ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ನಿರಾಕರಿಸಿದರು. ಸಚಿವರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ತಾನು ಅಧಿಕಾರದ ಹಿಂದೆ ಹೋಗುವುದಿಲ್ಲ. ಅಧಿಕಾರ ಅದಾಗಿಯೇ ಒಲಿದು ಬರಬೇಕು ಎಂದಷ್ಟೇ ಹೇಳಿದರು.

ಪುತ್ತೂರು ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷೆ ಪುಲಸಾö ರೈ, ಬಿಜೆಪಿಯ ಪ್ರಮುಖರಾದ ವಾಡ್ಯಪ್ಪ ಬಿಳಿನೆಲೆ, ರಾಧಾಕೃಷ್ಣ ನೆಟ್ಟಣ, ಸತೀಶ ಎರ್ಕ, ಧರ್ಮಪಾಲ ಸೂಡ್ಲು, ವಿನಯ ಕಳಿಗೆ, ಕೇಶವ ಬಿಳಿಮಲೆ, ಮುಖ್ಯ ಶಿಕ್ಷಕ ಹಿರಿಯಣ್ಣ ಹಾಗೂ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next