Advertisement

ವಿಚಾರಣೆಗೆ ಬರಲ್ಲ ನೀರವ್‌

08:15 AM Mar 01, 2018 | Team Udayavani |

ಕೋಲ್ಕತಾ/ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 12, 636  ಕೋಟಿ ರೂ. ವಂಚನೆ ಎಸಗಿ ಪರಾರಿಯಾಗಿರುವ ನೀರವ್‌ ಮೋದಿ, ತಾವು ವಿಚಾರಣೆಗೆ ಬರುವುದಿಲ್ಲ ಎಂದಿದ್ದಾರೆ. ತನಿಖೆಗೆ ಹಾಜರಾಗುವಂತೆ ಸೂಚಿಸಿ, ಕೇಂದ್ರ ತನಿಖಾ ಸಂಸ್ಥೆ ಸಿಬಿಐ ಅವರಿಗೆ ಕಳುಹಿಸಿರುವ ಇ-ಮೈಲ್‌ಗೆ ಉತ್ತರ ವಾಗಿ ಅವರು ಈ ಮಾಹಿತಿ ನೀಡಿದ್ದಾರೆ.  ಇದೇ ವೇಳೆ ಪಿಎನ್‌ಬಿಯ ಆಂತರಿಕ ಲೆಕ್ಕಪತ್ರ ಪರಿಶೋಧಕ ಪಿ.ಎನ್‌.ಶರ್ಮಾರನ್ನು ಸಿಬಿಐ ಬಂಧಿಸಿದೆ.

Advertisement

ಆರ್‌.ಪಿ.ಸಿಸ್ಟಮ್‌ ವಿರುದ್ಧ ದೂರು: ಕಂಪ್ಯೂಟರ್‌ ತಯಾರಿಕೆ ಸಂಸ್ಥೆ ಆರ್‌ಪಿ ಇನ್ಫೋಸಿಸ್ಟಮ್‌ ಮಾಲೀಕ ಶಿವಾಜಿ ಪಂಜಾ ವಿರುದ್ಧ ಕೆನರಾ ಬ್ಯಾಂಕ್‌ ದೂರು ದಾಖಲಿಸಿದೆ. ಶಿವಾಜಿ ಮಾಲೀಕತ್ವದ ಆರ್‌ಪಿ ಇನ್ಫೋಸಿಸ್ಟಂ ಸಂಸ್ಥೆ ವಿವಿಧ ಬ್ಯಾಂಕ್‌ಗಳಿಗೆ 780 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದ್ದು, ಈ ಪೈಕಿ ಕೆನರಾ ಬ್ಯಾಂಕ್‌ಗೆ 40 ಕೋಟಿ ರೂ. ಸಾಲ ಮರುಪಾವತಿಯಾಗಬೇಕಿದೆ.

ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿಗೆ ಆಪ್ತನಾಗಿದ್ದ ಶಿವಾಜಿ ಪಂಜಾ ವಿರುದ್ಧ 2015ರಲ್ಲೇ ಐಡಿಬಿಐ ಬ್ಯಾಂಕ್‌ ಸಿಬಿಐಗೆ ದೂರು ಸಲ್ಲಿಸಿತ್ತು. ಐಡಿಬಿಐಗೆ   ಅಂದರೆ 180 ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ಈ ಮಧ್ಯೆ, ಕಾರ್ಪೊರೇಷನ್‌ ಬ್ಯಾಂಕ್‌ಗೆ 6.77 ಕೋಟಿ ರೂ. ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜೆಮ್ಶೆಡ್‌ಪುರದ ವ್ಯಕ್ತಿಯನ್ನು ಬಂಧಿಸಲಾಗಿದೆ. 

780 ಕೋಟಿ ರೂ. ಅವ್ಯವಹಾರ: ಸುಭಿಕ್ಷಾ ರಿಟೇಲ್‌ ಚೈನ್‌ ಮಾಲೀಕ ಆರ್‌. ಸುಬ್ರಮಣಿಯನ್‌ 13 ಬ್ಯಾಂಕ್‌ಗಳಿಗೆ 750 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಂಧಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next