Advertisement

ನೇತ್ರಾವತಿ ನದಿ ಪ್ರವಾಹ : ಪಂಜರದ ಮೀನು ಕೃಷಿಗೆ 18 ಲಕ್ಷ ರೂ. ನಷ್ಟ

01:46 AM Jul 21, 2024 | Team Udayavani |

ಮಂಗಳೂರು: ಭಾರೀ ಮಳೆ ಮತ್ತು ಗಾಳಿ ಯಿಂದಾಗಿ ಜಪ್ಪು ಫೆರಿ ರಸ್ತೆಯ ನೇತ್ರಾವತಿ ನದಿಯ ಉದ್ದ ಕ್ಕೂ ರಚಿಸಲಾಗಿದ್ದ ಪಂಜರ ಮೀನು ಕೃಷಿಗೆ ಸಾಕಷ್ಟು ಹಾನಿಯಾಗಿದೆ. ಮಳೆ ಮತ್ತು ಭಾರಿ ಪ್ರಮಾಣದಲ್ಲಿ ಅಣೆಕಟ್ಟಿನ ನೀರನ್ನು ಬಿಡುಗಡೆ ಮಾಡಿದ್ದರಿಂದ ಅಂದಾಜು 8.9 ಲಕ್ಷ ರೂ. ಮೌಲ್ಯದ ಸೀಬಾಸ್‌ ಮೀನುಗಳು ಸಾವನ್ನ ಪ್ಪಿವೆ. ಹೆಚ್ಚುವರಿಯಾಗಿ, 9 ಲಕ್ಷ ಮೌಲ್ಯದ 9 ಪಂಜರಗಳು ಹಾನಿಗೊಳಗಾಗಿದ್ದು, 18 ಲಕ್ಷ ರೂ. ನಷ್ಟ ಸಂಭವಿಸಿದೆ.

Advertisement

ಪಂಜರ ಮೀನು ಕೃಷಿಕರಾದ ಸುದೇಶ್‌ ಕುಮಾರ್‌, ರûಾ ಹಾಗೂ ಕಸ್ತೂರಿ ಅವರು ಮೀನು ಕೃಷಿ ಕೈಗೊಳ್ಳುತ್ತಿದ್ದರು. ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸ್ಥಳಕ್ಕೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಯ್ಯ ಡಿ. ಮತ್ತು ಉಪ ನಿರ್ದೇಶಕ ದಿಲೀಪ್‌ ಕುಮಾರ್‌ ಅವರು ಭೇಟಿ ನೀಡಿ, ಹಾನಿ ಪ್ರಮಾಣವನ್ನು ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next