Advertisement

Netravati River: ಅಂದು ಉಕ್ಕಿ ಹರಿದಿದ್ದ ನೇತ್ರಾವತಿ ಇಂದು ಬತ್ತುವ ಭೀತಿಯಲ್ಲಿ!

01:03 PM Aug 18, 2023 | Team Udayavani |

ಉಪ್ಪಿನಂಗಡಿ: ಸಾಮಾನ್ಯವಾಗಿ ಪ್ರತೀ ಜುಲೈ, ಅಗಸ್ಟ್‌ನಲ್ಲಿ ನದಿಗಳು ಮೈದುಂಬಿ ಹರಿಯುತ್ತಿದ್ದರೆ ಈ ವರ್ಷ ಎಲ್ಲ ನದಿ ತೊರೆಗಳು ಬತ್ತಿವೆ. ನೇತ್ರಾವತಿ ಮತ್ತು ಕುಮಾರಧಾರಾ ನದಿಗಳು 2019ರ ಅಗಸ್ಟ್‌ 16, 17ರಂದು ಉಕ್ಕಿ ಹರಿದು ಸಂಗಮಿಸಿದ್ದವು. ಉಪ್ಪಿನಂಗಡಿಯ ದೇವಸ್ಥಾನ ಜಲಾವೃತವಾಗಿತ್ತು. ಆದರೆ ಈ ವರ್ಷದ ಅಗಸ್ಟ್‌ 17ರಂದು ನೇತ್ರಾವತಿ ಸೊರಗಿದೆ.

Advertisement

ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆಯ ಪ್ರಮಾಣ ಗಣನೀಯ ಕಡಿಮೆಯಾಗಿರುವುದು ನೇತ್ರಾವತಿಯಲ್ಲಿ ನೀರಿನ ಕುಸಿತಕ್ಕೆ ಕಾರಣ. ಕೆಲವು ದಿನಗಳಿಂದ ಸುಡುಬಿಸಿಲ ವಾತಾವರಣ ಇದ್ದು, ತೋಡುಗಳೂ ಬರಿದಾಗುತ್ತಿವೆ. ಮಳೆ ನೀರನ್ನೇ ನಂಬಿ ಗದ್ದೆ ಬೇಸಾಯ ಮಾಡಿರುವ ರೈತರು ಒಣಗುತ್ತಿರುವ ಗದ್ದೆಯನ್ನು ನೋಡುತ್ತ ತಲೆಮೇಲೆ ಕೈ ಹೊತ್ತಿದ್ದಾರೆ.

ಇದನ್ನೂ ಓದಿ: Politics;10-15 ಮಂದಿ ಹಾಲಿ-ಮಾಜಿ ಶಾಸಕರು ಕಾಂಗ್ರೆಸ್ ಗೆ ಬರುತ್ತಿದ್ದಾರೆ: ಚಲುವರಾಯಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next