Advertisement

‘ಕನಸು’ಸಮಾವೇಶದಲ್ಲಿ ನೆಕ್ಕಿಲಾಡಿ ಜೆಸಿಐಗೆ ಹಲವು ಪ್ರಶಸ್ತಿ

09:15 PM Jun 01, 2017 | Team Udayavani |

ಉಪ್ಪಿನಂಗಡಿ: ವಿಟ್ಲದಲ್ಲಿ ಇತ್ತೀಚೆಗೆ ನಡೆದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜೆ.ಸಿ.ಐ. ವಲಯಗಳನ್ನೊಳಗೊಂಡ ಜೂನಿಯರ್‌ ಚೇಂಬರ್‌ನ ಮಧ್ಯಂತರ ಸಮ್ಮೇಳನ ‘ಕನಸು’ ಸಮಾವೇಶದಲ್ಲಿ ನೆಕ್ಕಿಲಾಡಿ ಜೆ.ಸಿ.ಐ. ಘಟಕಕ್ಕೆ ಅತ್ಯುತ್ತಮ ಘಟಕಾಧ್ಯಕ್ಷ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ. ಘಟಕಾಧ್ಯಕ್ಷರಾಗಿರುವ ಶಿವಕುಮಾರ್‌ ಬಾರಿತ್ತಾಯರ ಸಶಕ್ತ ನೇತೃತ್ವದಲ್ಲಿ 2017ನೇ ಸಾಲಿನಲ್ಲಿ ನೆಕ್ಕಿಲಾಡಿ ಜೆ.ಸಿ.ಐ. ಘಟಕವು ಹಮ್ಮಿಕೊಂಡಿದ್ದ ಹಲವಾರು ಸಮಾಜಮುಖೀ ಕಾರ್ಯಕ್ರಮಗಳನ್ನು ಪರಿಗಣಿಸಿ ಈ ವಿಶೇಷ ಪುರಸ್ಕಾರಗಳನ್ನು ನೀಡಲಾಯಿತು.

Advertisement

ಉಪ್ಪಿನಂಗಡಿ-ನೆಕ್ಕಿಲಾಡಿ ಪರಿಸರದಲ್ಲಿ ಎರಡು ಶಾಲೆಗಳಿಗೆ ಶುದ್ಧ ನೀರಿನ ಯಂತ್ರಗಳ ಕೊಡುಗೆ, ಹಲವಾರು ಉಪಯುಕ್ತ ತರಬೇತಿ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಚಟುವಟಿಕೆಗಳಿಗಾಗಿ ಈ ಘಟಕಕ್ಕೆ ‘ಅತ್ಯುತ್ತಮ ಘಟಕಾಧ್ಯಕ್ಷ’ ಪ್ರಶಸ್ತಿ ಸೇರಿದಂತೆ ಇನ್ನಿತರ ಮನ್ನಣೆಗಳನ್ನು ಘಟಕಾಧ್ಯಕ್ಷ ಶಿವಕುಮಾರ್‌ ಬಾರಿತ್ತಾಯ ಅವರು ವಲಯಾಧ್ಯಕ್ಷ ಸಂತೋಷ್‌ ಜಿ. ಅವರಿಂದ ಪಡೆದುಕೊಂಡರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿಕಟಪೂರ್ವ ವಲಯಾಧ್ಯಕ್ಷ ಸಂದೀಪ್‌ ಕುಮಾರ್‌, ಪೂರ್ವ ವಲಯಾಧ್ಯಕ್ಷ ಚಂದ್ರಶೇಖರ್‌ ನಾಯರ್‌, ವಲಯ ಉಪಾಧ್ಯಕ್ಷ ಮೋಹನ್‌, ವಲಯ ಕಾರ್ಯದರ್ಶಿ ಪ್ರಶಾಂತ್‌ ಕುಮಾರ್‌ ರೈ, ವಿನೀತ್‌ ಶಗ್ರಿತ್ತಾಯ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next