Advertisement

ನೆಹರೂ ಓಲೆಕಾರ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರಿಂದ ಮನವಿ

11:26 AM Aug 03, 2021 | Team Udayavani |

ಬೆಂಗಳೂರು : ನೆಹರೂ ಓಲೆಕಾರ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ನಗರದ ಕಾವೇರಿ ನಿವಾಸದ ಬಳಿ ಓಲೆಕಾರ್ ಬೆಂಬಲಿಗರು ಘೋಷಣೆ ಕೂಗಿದ್ದಾರೆ.

Advertisement

ನ್ಯಾಯ ಬೇಕು, ನೆಹರೂ ಓಲೆಕಾರ್ ಅವರಿಗೆ ಸಚಿವ ಸ್ಥಾನ ಕೊಡಬೇಕೆಂದು ಘೋಷಣೆ ಕೂಗುವ ಮೂಲಕ ಮನವಿ ಮಾಡಿದ್ದಾರೆ. ಈ ವೇಳೆ ಪ್ರತಿಭಟನೆ ಮಾಡಬಾರದೆಂದು ಪೊಲೀಸರು ಮನವೊಲಿಸುತ್ತಿದ್ದಾರೆ.

ಇನ್ನು ನೆಹರೂ ಓಲೆಕಾರ್ ರಿಗೆ ಸಚಿವ ಸ್ಥಾನ ಕೊಡದಿದ್ರೆ ಸಿಎಂ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಬೆಂಬಲಿಗರು ಎಚ್ಚರಿಕೆ ನೀಡಿದ್ದಾರೆ. ನೆಹರೂ ಓಲೆಕಾರ್ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಕೊಡದೆ, ಸಿಎಂ ಹಾವೇರಿಗೆ ಬಂದ್ರೆ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಓಲೆಕಾರ್ ಬೆಂಬಲಿಗರು ಕಾವೇರಿ ನಿವಾಸದ ಎದುರು ಸಿಎಂಗೆ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next