Advertisement

ಸೋಂಕು ತಡೆಗೆ ತಾಲೂಕಾಡಳಿತ ನಿರ್ಲಕ್ಷ್ಯ

03:55 PM Apr 17, 2021 | Team Udayavani |

ಮಧುಗಿರಿ: ಇಡೀ ರಾಜ್ಯದಲ್ಲಿ ಉಪ ಚುನಾವಣೆಯಕಂಪು ಹರಡಿದ್ದು, ಇದರೊಂದಿಗೆ ಕೊರೊನಾಸೋಂಕು ಹರಡುತ್ತಿದೆ. ಮಧುಗಿರಿಯಲ್ಲೂ ಈ ಬಾರಿಕೊರೊನಾ ರಣಕೇಕೆ ಹಾಕುತ್ತಿದ್ದು, ಗುರುವಾರ 39ಹೊಸ ಪ್ರಕರಣ ಪತ್ತೆಯಾಗಿದ್ದು, ಇಬ್ಬರುಮೃತಪಟ್ಟಿದ್ದಾರೆ.

Advertisement

ಆದರೆ, ತಾಲೂಕು ಆಡಳಿತ ಮಾತ್ರಯಾವುದೇ ಕಠಿಣ ನಿಲುವು ತಗೆದುಕೊಳ್ಳದೆನಿರ್ಲಕ್ಷವಹಿಸಿದ್ದು, ಮಧುಗಿರಿ ಲಾಕ್‌ಡೌನ್‌ ನತ್ತಜಾರುತ್ತಿದೆ.ರಾಜ್ಯದಲ್ಲಿ ಕೊರೊನಾ 2ನೇ ಅಲೆಯಿದ್ದು,ರೂಪಾಂತರಿ ತಳಿಯ ಅನುಷ್ಠಾನವಾಗಿದೆ. ಆದರೆ,ಸರ್ಕಾರ ಉಪ ಚುನಾವಣೆಯತ್ತ ಗಮನಹರಿಸುತ್ತಿದ್ದು, ಜನರ ಆರೋಗ್ಯದ ಕಡೆ ಗಮನಹರಿಸುತ್ತಿಲ್ಲ.

ಜನರು ಸಹ ಯಾವುದೇ ಕೊರೊನಾನಿಯಮವನ್ನು ಪಾಲಿಸದೆ ಓಡಾಡುತ್ತಿದ್ದಾರೆ.ಇದರಿಂದ ತುಮಕೂರು ಜಿಲ್ಲೆ ರಾಜ್ಯದಲ್ಲಿ 2ನೇಸ್ಥಾನವನ್ನು ಪಡೆದಿದ್ದು, ಮಧುಗಿರಿ ಜಿಲ್ಲೆಯಲ್ಲಿ 2ನೇಸ್ಥಾನದತ್ತ ಮುಖ ಮಾಡಿದೆ.ಮಧುಗಿರಿ ಬೆಂಗಳೂರಿಗೆ ಕೇವಲ 100 ಕಿ.ಮೀ.ಇದ್ದು, ಕ್ಷೇತ್ರದ 50% ನಾಗರಿಕರು ಉದ್ಯೋಗ ಹರಸಿಬೆಂಗಳೂರಲ್ಲಿ ನೆಲೆಸಿದ್ದಾರೆ.

ಇಂದು ಬೆಂಗಳೂರಿನಲ್ಲಿಕೊರೊನಾ ಮರಣಕೇಕೆ ಹಾಕುತ್ತಿದ್ದು, ದಿನವೊಂದಕ್ಕೆ10 ಸಾವಿರದಷ್ಟು ಪ್ರಕರಣ ಪತ್ತೆಯಾಗುತ್ತಿವೆ. ಇದುಕಳೆದ ವರ್ಷ ಅಮೆರಿಕದಲ್ಲಿ ಹೆಚ್ಚಾದ ಪ್ರಕರಣಗಳಿಗಿಂತದುಪ್ಪಟ್ಟಾಗಿರುವುದು ಆತಂಕ ಮೂಡಿಸಿದೆ.

ಜಾಗೃತಿ ಕಾರ್ಯಕ್ರಮ ಆಗುತ್ತಿಲ್ಲ: ಇನ್ನೂ ಲಾಕ್‌ಡೌನ್‌ ಆದರೆ ಬೆಂಗಳೂರಿನಿಂದ ಬರುವ ಕ್ಷೇತ್ರದಜನರು ಇಲ್ಲಿಯೂ ಕೊರೊನಾ ಹರಡಲುಕಾರಣರಾಗುತ್ತಾರೆ.  ಇದು ತಾಲೂಕು ಆಡಳಿತಕ್ಕೆಸವಾಲಿನ ಕೆಲಸವೇ ಸರಿ. ಸಾಮಾಜಿಕ ಅಂತರವಿಲ್ಲದೆ ಮಾಸ್ಕ್ ಧರಿಸದ ಸಾರ್ವಜನಿಕರು, ಎಲ್ಲ ಕೆಲಸಗಳಲ್ಲೂ ಕೊರೊನಾ ಮರೆತು ಪಾಲ್ಗೊಳ್ಳುತ್ತಿದ್ದಾರೆ. ಇದುಭವಿಷ್ಯದ ದೃಷ್ಟಿಯಿಂದ ಅಪಾಯವನ್ನು ಮೈ ಮೇಲೆಎಳೆದು ಕೊಂಡಂತಿದೆ. ಮಾಂಸದಂಗಡಿ, ತರಕಾರಿಮಾರ್ಕೆಟ್‌, ಮಾಲ್‌ ಹಾಗೂ ಇತರೆ ಸಾರ್ವಜನಿಕಸ್ಥಳಗಳಲ್ಲಿ ಕೊರೊನಾ ಬಗ್ಗೆ ಯಾವುದೇ ಜಾಗೃತಿಕಾರ್ಯಕ್ರಮ ಇಲಾಖೆಗಳಿಂದ ಆಗುತ್ತಿಲ್ಲ. ಪೊಲೀಸ್‌ಇಲಾಖೆ ಕೂಡ ವಾಹನ ಸವಾರರು ಹಾಗೂಕೊರೊನಾ ಕಾನೂನು ಉಲ್ಲಂ ಸುವವರ ಮೇಲೆಕಠಿಣ ಕೈಗೊಳ್ಳಬೇಕಿದೆ.

Advertisement

ಸೋಂಕಿತರಿಗೆ ಹಾಸ್ಟೆಲ್‌ ವ್ಯವಸ್ಥೆ: ಈ ಕುರಿತುಉದಯವಾಣಿಯೊಂದಿಗೆ ಮಾತನಾಡಿದ ನೂತನತಹಶೀಲ್ದಾರ್‌ ವೈ.ವಿ.ರವಿ, ಈಗಾಗಲೇ ಕೊರೊನಾವಿಚಾರದಲ್ಲಿ ಸಭೆ ನಡೆಸಿದ್ದೇನೆ. ಆರೋಗ್ಯ, ಪುರಸಭೆ,ಪೊಲೀಸ್‌ ಇಲಾಖೆಗಳ ಸಹಕಾರದಲ್ಲಿ ಕಳೆದ ಬಾರಿನಡೆಸಲಾದ ಕ್ರಮಗಳ ಬಗ್ಗೆ ಚರ್ಚಿಸಿದ್ದು, ಸೂಕ್ಷ್ಮಪ್ರದೇಶಗಳನ್ನು ಕಂಟೋನ್ಮೆಂಟ್‌ ಝೋನ್‌ಗಳಾಗಿಪರಿಗಣಿಸುತ್ತೇವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 14 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು,ಉಳಿದ ವರನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸೋಂಕಿತರಿಗಾಗಿಹಾಸ್ಟೆಲ್‌ ವ್ಯವಸ್ಥೆ ಮಾಡಲಾಗಿದ್ದು, ಸೊಂಕಿತರುಹೆಚ್ಚಾದರೆ ಬಳಕೆ ಮಾಡಿಕೊಳ್ಳುತ್ತೇವೆ ಎಂದರು.

ಎಚ್ಚೆತ್ತುಕೊಳ್ಳದ ತಾಲೂಕು ಆಡಳಿತ: ಕಳೆದ ಬಾರಿಎಸಿ ನಂದಿನಿದೇವಿ, ತಹಶೀಲ್ದಾರ್‌ ಆಗಿದ್ದಡಾ.ಜಿ.ವಿಶ್ವನಾಥ್‌ ಹಾಗೂ ಸಿಪಿಐ ಸರ್ದಾರ್‌,ಪಿಎಸ್‌ಐ ಕಾಂತರಾಜ್‌, ಪುರಸಭೆ ಮುಖ್ಯಾಧಿ ಕಾರಿಅಮರನಾರಾಯಣ್‌, ಈಗಿನ ಟಿಎಚ್‌ಒ ಡಾ.ರಮೇಶ್‌ಬಾಬು ಹಾಗೂ ಹಲವು ಕೊರೊನಾವಾರಿಯರ್ಸ್‌ಗಳ ಪರಿಶ್ರಮದಿಂದ ಮಧುಗಿರಿಯಲ್ಲಿಕೊರೊನಾ ಅಷ್ಟಾಗಿ ತನ್ನ ಭಯಂಕರ ರೂಪವನ್ನುತೋರಲು ಆಗಿರಲಿಲ್ಲ. ಆದರೆ, ಇಂದು ನೂತನ ಎಸಿಆಗಿರುವ ಸೋಮಪ್ಪ ಕಡಕೋಳ, ತಹಶೀ ಲ್ದಾರ್‌ಆಗಿ ವೈ.ವಿ.ರವಿ ಅಧಿಕಾರದಲ್ಲಿದ್ದು, ಕೊರೊನಾನಿಯಮ ಎಷ್ಟು ಗಂಭೀರವಾಗಿ ಪಾಲಿಸುತ್ತಾರೋನೋಡಬೇಕಿದೆ.

 

ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next