Advertisement

ಕ್ವಾರಂಟೈನಲ್ಲಿದ್ದ ನಾಲ್ವರಲ್ಲಿ ನೆಗೆಟಿವ್‌

05:49 PM Apr 10, 2020 | Team Udayavani |

ಶ್ರೀರಂಗಪಟ್ಟಣ: ಕೋವಿಡ್ 19 ಸೋಂಕು ಶಂಕಿತರೆಂದು ಕ್ವಾರಂಟೈನಲ್ಲಿದ್ದ ನಾಲ್ವರಲ್ಲಿ ನೆಗೆಟಿವ್‌ ಕಂಡುಬಂದಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ವೆಂಕಟೇಶ್‌ ತಿಳಿಸಿದ್ದಾರೆ.

Advertisement

ತಾಲೂಕಿನ ವಿವಿಧೆಡೆಯಿಂದ ಒಟ್ಟು 8 ಮಂದಿಯನ್ನು ಕೋವಿಡ್ 19 ಶಂಕಿತರೆಂದು ಪರಿಗಣಿಸಿ ಕ್ವಾರಂಟೈನಲ್ಲಿ ಇರಿಸಲಾಗಿತ್ತು. ಆಸ್ಪತ್ರೆಯಲ್ಲಿ 4 ಮಂದಿ ಹಾಗೂ ಸೋಂಕು ಶಂಕಿತರ ಮನೆಯಲ್ಲೇ 4 ಮಂದಿಯನ್ನಿರಿಸಿ ಅವರ ಮೇಲೆ 14 ದಿನ ಆಸ್ಪತ್ರೆಯ ಸಿಬ್ಬಂದಿ ನಿಗಾವಹಿಸಿದ್ದರು. ಅವರೆಲ್ಲರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಸೋಂಕು ಇಲ್ಲದಿರುವ ಬಗ್ಗೆ ವೈದ್ಯರು ದೃಢಪಡಿಸಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅವರನ್ನು ತಹಶೀಲ್ದಾರ್‌ ರೂಪಾ ನೇತೃತ್ವದಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.

ನಂಜನಗೂಡು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್‌, ವಿನಯ್‌ ಕುಮಾರ್‌, ಪಂಪ್‌ ಹೌಸ್‌ ನಿವಾಸಿ ಕೃಷ್ಣಕುಮಾರ್‌, ಬಳ್ಳೆಕೆರೆ ಆಕಾಶ್‌ ನನ್ನು ಮಾರ್ಚ್‌ 26ರಿಂದ ಸಾರ್ವಜನಿಕ ಆಸ್ಪತ್ರೆಯ ನಿಗಾ ಘಟಕದಲ್ಲಿರಿಸಿ ನಿಗಾ ವಹಿಸಲಾಗಿತ್ತು. ಇನ್ನು 14 ದಿನ ಹೊರಗೆ ಹೋಗದಂತೆ ಎಚ್ಚರಿಸಲಾಗಿದೆ. ಪ್ರತಿದಿನ ನಮ್ಮ ಸಿಬ್ಬಂದಿ ಅವರ ಮನೆಗಳಿಗೆ ಭೇಟಿ ನೀಡಿ ತಪಾಸಣೆಗೆ ಮಾಡಲಿದ್ದಾರೆ ಎಂದು ಡಾ ವೆಂಕಟೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next