Advertisement

ನೀಟ್‌ಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ

07:23 PM Oct 30, 2021 | Team Udayavani |

ಚೆನ್ನೈ: ವೈದ್ಯಕೀಯ ಶಿಕ್ಷಣಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌)ಯ ಭಯಕ್ಕೆ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

Advertisement

ಕೊಯಮತ್ತೂರ್‌ನ ಸಂಗರಾಯಪುರಂನ ಕೆ.ಕೀರ್ತಿವಾಸನ್‌(20) ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಆತ ಈ ಹಿಂದೆ 2019 ಮತ್ತು 2020ರಲ್ಲಿ ನೀಟ್‌ ಪರೀಕ್ಷೆ ಬರೆದಿದ್ದರೂ ಪಾಸ್‌ ಆಗಿರಲಿಲ್ಲ. ಈ ವರ್ಷವೂ ನೀಟ್‌ ಪರೀಕ್ಷೆ ಬರೆದಿದ್ದ ಕೀರ್ತಿವಾಸನ್‌, ಪರೀಕ್ಷೆಯ ಕೀ ಉತ್ತರಗಳು ಬಂದ ನಂತರ ತೀರಾ ನೊಂದುಕೊಂಡಿದ್ದ.

ಈ ಬಾರಿಯೂ ಪಾಸ್‌ ಆಗುವುದಿಲ್ಲವೆಂದು ಪೋಷಕರೆದುರು ಹೇಳಿಕೊಂಡಿದ್ದನಂತೆ. ಅದೇ ನೋವಿನಲ್ಲಿ ಆತ ಶುಕ್ರವಾರ ಕೀಟನಾಶಕ ಸೇವಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next