Advertisement

ನಿರಗೂಡಿ ಮಲ್ಲಯ್ಯ ಮುತ್ಯಾ ಮೆರವಣಿಗೆ

01:23 PM Aug 16, 2017 | |

ಬಸವಕಲ್ಯಾಣ: ಜೈಭಾರತ ಮಾತಾ ಸೇವಾ ಸಮಿತಿ ತಾಲೂಕು ಘಟಕದ ಉದ್ಘಾಟನೆಗಾಗಿ ನಗರಕ್ಕೆ ಆಗಮಿಸಿದ ನಿರಗೂಡಿಯ ಶ್ರೀ ಮಲ್ಲಯ್ಯ ಮುತ್ಯಾ ಅವರ ಭವ್ಯ ಮೆರವಣಿಗೆ ಜರುಗಿತು. ಅಲಂಕೃತ ವಾಹನದಲ್ಲಿ ಭಾರತ ಮಾತೆಯ ಭಾವಚಿತ್ರ, ಪುಷ್ಪಾಲಂಕಾರ ಮಾಡಿದ ತೆರೆದ ವಾಹನದಲ್ಲಿ ಆಸೀನರಾದ ಶ್ರೀಗಳನ್ನು ಸಸ್ತಾಪುರ ಬಂಗ್ಲಾದಿಂದ ತ್ರಿಪುರಾಂತ ಮಾರ್ಗವಾಗಿ ನಗರದ ಅಂಬೇಡ್ಕರ್‌ ವೃತ್ತ, ಗಾಂಧಿ ವೃತ್ತ, ಬಸವೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ಮಾಡಲಾಯಿತು. ಭಕ್ತಿಗೀತೆ, ಜೈ ಘೋಷಗಳು ಮೊಳಗಿದವು. ಭಕ್ತರ ಕೈಯಲ್ಲಿ ರಾಷ್ಟ್ರಧ್ವಜಗಳು ಹಾರಡುತಿದ್ದವು. ದಾರಿಯುದ್ದಕ್ಕೂ ರಸ್ತೆ ಬದಿ ನಿಂತಿದ್ದ ಜನರು ಭಕ್ತಿ ಶ್ರದ್ಧೆಯಿಂದ ಸ್ವಾಗತಿಸಿ, ದರ್ಶನ ಪಡೆದರು. ದೇವಸ್ಥಾನದಿಂದ ಮುಖ್ಯ ರಸ್ತೆ ಮೂಲಕ ಬಿರಾದಾರ ಕಾಲನಿಯವರೆಗೆ ರ್ಯಾಲಿ ನಡೆದ ನಂತರ ಜೈಭಾರತ ಮಾತಾ ಸೇವಾ ಸಮಿತಿ ತಾಲೂಕು ಘಟಕದ ಉದ್ಘಾಟನೆ ಜರುಗಿತು. ಸೇವಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷರು ಆಗಿರುವ ಶ್ರೀ ಮಲ್ಲಯ್ಯ ಮುತ್ಯಾ ಅವರು ಸೇವಾ ಸಮಿತಿಯ ತಾಲೂಕು ಘಟಕ ಉದ್ಘಾಟಿಸಿದರು. ಜಿಪಂ ಸದಸ್ಯ ಗುಂಡುರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಧೂಳಪ್ಪ ಬೇಲೂರ, ಅಂಬ್ರಿಶ ಕೋರಾಳೆ, ಅಮೃತ ದಾಮಿ, ಆಕಾಶ, ಆನಂದ ನಾಯಕ, ದೇವರಾಜ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next