Advertisement

ಎನ್‌.ಡಿ.ಎ. ಮಹಾಸಂಪರ್ಕ ಅಭಿಯಾನ: ಮತಯಾಚನೆ

01:28 AM Apr 09, 2019 | Team Udayavani |

ಕುಂಬಳೆ: ಎನ್‌.ಡಿ.ಎ. ಮಹಾಸಂಪರ್ಕ ಅಭಿಯಾನದಂಗವಾಗಿ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ 1,012 ಬೂತ್‌ಗಳಲ್ಲಿ 3,036 ಗುಂಪುಗಳು ಸುಮಾರು 20 ಸಹಸ್ರದಷ್ಟು ಮನೆಗಳಿಗೆ ಗೃಹಸಂಪರ್ಕ ನಡೆಸಿ ಕೇಂದ್ರ ಸರಕಾರದ ಸಾಧನೆಯ ಸಾಹಿತ್ಯ ಮತ್ತು ಅಭ್ಯರ್ಥಿಯ ವಿಜ್ಞಾಪನೆ ಪತ್ರಗಳನ್ನು ವಿತರಿಸಿ ಮತಯಾಚಿಸಿತು.

Advertisement

ಎನ್‌.ಎಸ್‌.ಎಸ್‌. ಕಾಸರಗೋಡು ಘಟಕಾಧ್ಯಕ್ಷ ನ್ಯಾಯವಾದಿ ಬಾಲಕೃಷ್ಣನ್‌ ನಾಯರ್‌ ಅವರ ಮನೆಯಿಂದ ಅಭ್ಯರ್ಥಿ ಕುಂಟಾರು ರವೀಶ ತಂತ್ರಿಯವರು ಆರಂಭಿಸಿದರು. ಎನ್‌.ಡಿ.ಎ. ಕಾಸರಗೋಡು ಲೋಕಸಭಾ ಚುನಾವಣ ಸಮಿತಿ ಅಧ್ಯಕ್ಷ ನಿವೃತ್ತ ಜಿಲ್ಲಾಧಿಕಾರಿ ಕೆ. ಶಶಿಧರ್‌, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್‌, ನ್ಯಾಯವಾದಿ ಅಶೋಕ್‌ ಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next