Advertisement

NDAಗೆ ಸಿಗದ ನಿರೀಕ್ಷಿತ ಬಹುಮತ: ಹೃದಯಾಘಾತದಿಂದ ಅಸುನೀಗಿದ ಬಿಜೆಪಿ ಕಟ್ಟಾಭಿಮಾನಿ…

03:36 PM Jun 04, 2024 | Team Udayavani |

ಹುಬ್ಬಳ್ಳಿ: ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ನಿರೀಕ್ಷಿತ ಬಹುಮತ ಸಿಗದ ಹಿನ್ನೆಲೆಯಲ್ಲಿ ಇಲ್ಲಿನ ವಿದ್ಯಾನಗರ ಶೆಟ್ಟರ ಲೇಔಟ್ ನಲ್ಲಿ ಬಿಜೆಪಿ ಕಟ್ಟಾಭಿಮಾನಿಯೊಬ್ಬರು ತೀವ್ರ ಹೃದಯಾಘಾತದಿಂದ ಅಸುನೀಗಿದ್ದಾರೆ.

Advertisement

ಶಿವಪ್ರಕಾಶ ಶಿವರುದ್ರಯ್ಯ ಮಠದ (55) ಎಂಬುವರೆ ಮೃತಪಟ್ಟವರು.

ಇವರು ಚುನಾವಣೆಯ ಫಲಿತಾಂಶವನ್ನು ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದಾಗ, ಎನ್‌ಡಿಎ ನೇತೃತ್ವದ ಬಿಜೆಪಿಗೆ ನಿರೀಕ್ಷಿತ ಬಹುಮತ ದೊರೆಯದಿದ್ದಾಗ ಘಾಸಿಗೊಂಡ ಇವರು ತೀವ್ರ ಹೃದಯಾಘಾತಕ್ಕೊಳಗಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾರೆ.‌ ಕುಟುಂಬಸ್ಥರು ಕೆಎಲ್ಇ ಸುಚಿರಾಯು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪ್ರಾಣ ಬಿಟ್ಟಿರುವುದಾಗಿ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Dakshina Kannada: ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಭರ್ಜರಿ ಗೆಲುವು… ಸಂಭ್ರಮಾಚರಣೆ

Advertisement

Udayavani is now on Telegram. Click here to join our channel and stay updated with the latest news.

Next