Advertisement

NDA; ಜೆಡಿಎಸ್‌ಗೆ 3 ಕ್ಷೇತ್ರ : ಮಂಡ್ಯ, ಹಾಸನ, ಕೋಲಾರ ಬಿಟ್ಟುಕೊಟ್ಟ ಬಿಜೆಪಿ

11:56 PM Mar 23, 2024 | Team Udayavani |

ಬೆಂಗಳೂರು: ಈಗಾ ಗಲೇ ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರಗಳನ್ನು ಮಿತ್ರಪಕ್ಷ ಜೆಡಿಎಸ್‌ಗೆ ನೀಡಿದ್ದ ಬಿಜೆಪಿ ಈಗ ಕೋಲಾರವನ್ನು ಬಿಟ್ಟುಕೊಟ್ಟಿದೆ. ಬಿಜೆಪಿ ಚುನಾವಣ ಉಸ್ತುವಾರಿ ರಾಧಾ ಮೋಹನ್‌ ಅಗರ್ವಾಲ್‌ ಈ ಬಗ್ಗೆ ಕೊನೆಗೂ ಮೌನ ಮುರಿದಿದಿದ್ದಾರೆ.

Advertisement

ಕೋಲಾರ, ಮಂಡ್ಯ, ಹಾಸನದಲ್ಲಿ ನಮ್ಮ ಕಾರ್ಯಕರ್ತರು ಪೂರ್ಣ ಶ್ರದ್ಧೆ ಹಾಗೂ ಮನಃಪೂರ್ವಕ ವಾಗಿ ಕೆಲಸ ಮಾಡಬೇಕು. ಅಲ್ಲಿ ಯಾರು ಅಭ್ಯರ್ಥಿ ಎನ್ನುವುದು ಮುಖ್ಯ ಅಲ್ಲ. 25 ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್‌ ಎಲ್ಲಿಯೂ ಹಸ್ತಕ್ಷೇಪ ಮಾಡಿಲ್ಲ ಎನ್ನುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು. ಇದರಿಂದ ಕೋಲಾರ ಹಾಲಿ ಸಂಸದ ಮುನಿಸ್ವಾಮಿಗೆ ಬಿಜೆಪಿ ಟಿಕೆಟ್‌ ಸಿಗುವುದಿಲ್ಲ ಎನ್ನುವುದು ಖಾತ್ರಿಯಾಗಿದೆ.

ಬೆಂಗಳೂರಿನ ಅರಮನೆ ಮೈದಾನ ದಲ್ಲಿ ನಡೆದ ಬಿಜೆಪಿ ಚುನಾವಣ ಕಾರ್ಯಾಗಾರದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ. ಮೈತ್ರಿ ಗೆಲುವಿಗೆ ಶ್ರಮಿಸಿ ಎಂದು ಪದೇಪದೆ ಅಗರ್ವಾಲ್‌ ಪ್ರತಿಪಾದಿಸಿರುವುದು ಹಲವು ಅನು ಮಾನಗಳಿಗೆ ಕಾರಣವಾಗಿದ್ದು, ಸ್ಥಳೀಯ ಸ್ತರದಲ್ಲಿ ಜೆಡಿಎಸ್‌ ಬಗ್ಗೆ ಬಿಜೆಪಿ ನಾಯಕರು ಹೊಂದಿರುವ ಅಸಮಾ ಧಾನ ಶಮನ ಮಾಡಲು ಈ ಹೇಳಿಕೆ ನೀಡಿದರೇ ಎಂಬ ಪ್ರಶ್ನೆ ಮೂಡಿದೆ.

ಇಂದು ಜೆಡಿಎಸ್‌ ಘೋಷಣೆ?
ರವಿವಾರ ಬೆಳಗ್ಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಪತ್ರಿಕಾ ಗೋಷ್ಠಿಯಲ್ಲಿ ಈ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next