Advertisement

ಹಾಸ್ಯಗಾರ ಕುನಾಲ್‌ ಕಮ್ರಾ ವಿರುದ್ಧ ಎನ್‌ಸಿಪಿಸಿಆರ್‌ ದೂರು

07:59 PM May 06, 2022 | Team Udayavani |

ನವದೆಹಲಿ: ಹಾಸ್ಯಗಾರ ಕುನಾಲ್‌ ಕಮ್ರಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ(ಎನ್‌ಸಿಪಿಸಿಆರ್‌) ಒತ್ತಾಯಿಸಿದೆ.

Advertisement

ಜರ್ಮನಿ ಪ್ರವಾಸದ ವೇಳೆ ಪ್ರಧಾನಿ ಮೋದಿ ಎದುರು ದೇಶಭಕ್ತಿ ಗೀತೆ ಹಾಡಿದ್ದ ಬಾಲಕನ ವಿಡಿಯೋ ಎಡಿಟಿಂಗ್‌ ಮಾಡಿ ಅಪ್‌ಲೋಡ್‌ ಮಾಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಯೋಗ ಒತ್ತಾಯಿಸಿದೆ.

ಬರ್ಲಿನ್‌ನಲ್ಲಿ ಭಾರತೀಯ ಮೂಲದ ಕುಟುಂಬದ ಬಾಲಕನೊಬ್ಬ “ಹೇ ಜನ್ಮಭೂಮಿ ಭಾರತ್‌’ ಹಾಡು ಹಾಡಿದ್ದ. ತಿರುಚಲಾಗಿರುವ ವಿಡಿಯೋದಲ್ಲಿ ಆ ಹಾಡಿನ ಬದಲಾಗಿ ಮೋದಿಯವರನ್ನು ಟೀಕಿಸುವಂತ ಹಾಡು ಹಾಕಲಾಗಿದೆ.

ಈ ವಿಡಿಯೋ ಬಾಲಕನಿಗೆ ಮಾನಸಿಕ ಹಿಂಸೆ ನೀಡುತ್ತದೆ ಎಂದು ಎನ್‌ಸಿಪಿಸಿಆರ್‌ ಆರೋಪಿಸಿದೆ.ವಿಡಿಯೋ ತೆಗೆಯುವಂತೆ ಟ್ವಿಟರ್‌ಗೆ ಮನವಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next