Advertisement

ಶರದ್ ಪವಾರ್ ಸುಳ್ಳು ಹೇಳುತ್ತಿದ್ದಾರೆ, ದೇಶ್ ಮುಖ್ ಅವರನ್ನು ರಕ್ಷಿಸುತ್ತಿದ್ದಾರೆ :ಫಡ್ನವಿಸ್

01:11 PM Mar 23, 2021 | Team Udayavani |

ಮುಂಬೈ : ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅನಿಲ್ ದೇಶ್ ಮುಖ್ ಅವರನ್ನು ರಕ್ಷಣೆ ಮಾಡುತ್ತಿದ್ದಾರೆ. ಯಾವ ಸತ್ಯಗಳು ಅವರ ಮಾತಿನಲ್ಲಿಲ್ಲ ಎಂದು ಬಿಜೆಪಿ ನಾಯಕ ದೇವೆಂದ್ರ ಫಡ್ನವಿಸ್ ಹೇಳಿದ್ದಾರೆ.

Advertisement

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವ ದಿನಾಂಕದಲ್ಲಿ ದೇಶ್ ಮುಖ್ ನಾಗ್ಪುರ ದ ಮನೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದರು ಎಂದು ಪವಾರ್ ನಿನ್ನೆ(ಸೋಮವಾರ, ಮಾ.220) ಹೇಳಿದ್ದರು. ಪವಾರ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಫಡ್ನವಿಸ್ ಈ ರೀತಿಯಾಗಿ ಹೇಳಿದ್ದಾರೆ.

ಓದಿ : ಆಫ್‌ಲೈನ್‌ ತರಗತಿ ನಿಲ್ಲದು, ನಿಗದಿತ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ: ಎಂದ ಅಶ್ವತ್ಥನಾರಾಯಣ

ಪೊಲೀಸ್ ಅಧಿಕೃತ ಮಾಹಿತಿ ಪ್ರಕಾರ, ಪೇಭ್ರವರಿ 17 ರಂದು ಸಹ್ಯಾದ್ರಿ ಅತಿಥಿ ಗ್ರಹಕ್ಕೆ ತೆರಳಿದ್ದರು. ಮತ್ತು ಫೇಬ್ರವರಿ 24 ರಂದು ಮಂತ್ರಾಲಯಕ್ಕೆ ತೆರಳಿದ್ದರು. ಫೆಬ್ರವರಿ 15 ರಿಂದ 27ರ ತನಕ ಅವರು ಹೋಮ್ ಕ್ವಾರಂಟೈನ್ ನಲ್ಲಿದ್ದರು. ಆದರೇ, ಕ್ವಾರಂಟೈನ್ ನನ್ನು ಮುರಿದು ಅಧಿಕಾರಿಗಳನ್ನು ಭೇಟಿಯಾಗಿದ್ದರು. ಅವರು ಐಸೋಲೇಶನ್ ನಲ್ಲಿ ಇದ್ದರಿಲಿಲ್ಲ. ಪವಾರ್ ನಿನ್ನೆ ಸರಿಯಾಗಿ ವಿವರಿಸಿಲ್ಲ ಎಂದು ನನಗೆ ಅನ್ನಿಸುತ್ತದೆ ಎಂದು ಫಡ್ನವಿಸ್ ಹೇಳಿದ್ದಾರೆ.


ಓದಿ : ಠಾಕ್ರೆ ಬಗ್ಗೆ ಮಾತಾಡಿದರೆ ‘ಆ್ಯಸಿಡ್ ದಾಳಿ’ ನಡೆಸುವುದಾಗಿ ಶಿವಸೇನೆ ಬೆದರಿಕೆ : ನವನೀತ್ ಕೌರ್

Advertisement
Advertisement

Udayavani is now on Telegram. Click here to join our channel and stay updated with the latest news.

Next