Advertisement

ಪೊಲೀಸ್‌ ಶಿಬಿರಕ್ಕೆ ಭೂಮಿ ಕೊಟ್ಟ ವ್ಯಕ್ತಿಯನ್ನು ಗುಂಡಿಕ್ಕಿ ಕೊಂದ ನಕ್ಸಲರು

09:04 AM Jun 12, 2019 | Team Udayavani |

ರಾಯಪುರ : ಪೊಲೀಸರಿಗೆ ಶಿಬಿರ ಹಾಕಲು ತನ್ನ ಭೂಮಿಯನ್ನು ಕೊಟ್ಟನೆಂಬ ಶಂಕೆಯಲ್ಲಿ ವ್ಯಕ್ತಿಯೊಬ್ಬನನ್ನು ನಕ್ಸಲರು ಗುಂಡಿಕ್ಕಿ ಕೊಂದ ಘಟನೆ ಛತ್ತೀಸ್‌ಗಢದ ಕಂಕೇರ್‌ ಜಿಲ್ಲೆಯಲ್ಲಿ ನಡೆದಿದೆ.

Advertisement

ಕಂಕೇರ್‌ ಜಿಲ್ಲೆಯ ಚರಮಾ ಎಂಬಲ್ಲಿನ ದೇವೇಂದ್ರ ಕುಮಾರ್‌ ಸಿನ್ಹಾ ಮತ್ತು ಆತನ ಮಗ, ಬಡೇತೇವಡಾ ಗ್ರಾಮದಲ್ಲಿನ ತನ್ನ ಕೃಷಿ ಭೂಮಿಗೆ ಹೋಗಿದ್ದಾಗ ಸುಮಾರು ಒಂದು ಡಜನ್‌ ನಕ್ಸಲರು ಅಲ್ಲಿಗೆ ಬಂದರು.

ಅಪ್ಪ-ಮಗನನ್ನು ಬಲವಂತವಾಗಿ ಸಮೀಪದ ಅರಣ್ಯಕ್ಕೆ ಒಯ್ದು ನಕ್ಸಲರು ಅಲ್ಲಿ ದೇವೇಂದರ್‌ ಅವರನ್ನು ಗುಂಡಿಕ್ಕಿ ಕೊಂದರು. ಪೊಲೀಸರಿಗೆ ತಿಳಿಸಿದರೆ ಜೋಕೆ ಎಂಬ ಎಚ್ಚರಿಕೆಯನ್ನು ಕೊಟ್ಟು ಆತನ ಮಗನಿಗೆ ಹೋಗಲು ಬಿಟ್ಟರು ಎಂದು ಪೊಲೀಸರು ತಿಳಿಸಿದರು.

ಅರಣ್ಯದಿಂದ ಗುಂಡಿನ ಸದ್ದು ಕೇಳಿ ಬಂದಾಗ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದರು. ನಕ್ಸಲರು ಅದಾಗಲೇ ಸ್ಥಳದಿಂದ ಪರಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next