Advertisement

ನಕ್ಸಲೀಯರ ಅಟ್ಟಹಾಸ; ಡೈನಾಮೆಟ್ ಸ್ಫೋಟಕ್ಕೆ BJP ಮುಖಂಡನ ಮನೆ ಧ್ವಂಸ

09:09 AM Mar 29, 2019 | Nagendra Trasi |

ನವದೆಹಲಿ: ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಬೇಕೆಂದು ಆಗ್ರಹಿಸಿರುವ ನಕ್ಸಲೀಯರು ಬುಧವಾರ ತಡರಾತ್ರಿ ಡೈನಾಮೈ ಟ್ ಸ್ಫೋಟಗೊಳಿಸಿ ಬಿಜೆಪಿ ಮುಖಂಡರೊಬ್ಬರ ಮನೆಯನ್ನು ಧ್ವಂಸಗೊಳಿಸಿರುವ ಘಟನೆ ಬಿಹಾರದ ದುಮಾರಿಯಾದಲ್ಲಿ ನಡೆದಿದೆ.

Advertisement

ನಕ್ಸಲರು ಡೈನಾಮೆಟ್ ಬಳಸಿ ಬಿಜೆಪಿ ಮುಖಂಡ ಅಂಜು ಕುಮಾರ್ ಸಿಂಗ್ ಮನೆ ಮೇಲೆ ದಾಳಿ ನಡೆಸಿದ್ದರಿಂದ ಮನೆ ಧ್ವಂಸಗೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ. ಮನೆಯ ಎದುರುಭಾಗದ ಗೋಡೆ ಒಡೆದು ಛಿದ್ರವಾಗಿ ಹೋಗಿದೆ.

ಘಟನೆಯಲ್ಲಿ ಮಾಜಿ ಎಂಎಲ್ ಸಿ, ಬಿಜೆಪಿ ಮುಖಂಡ ಅಂಜು ಕುಮಾರ್ ಗಾಯಗೊಂಡಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ. ಡೈನಾಮೆಟ್ ಸ್ಫೋಟಗೊಂಡು ಮನೆ ಧ್ವಂಸಗೊಂಡ ನಂತರ ಮನೆಯ ಗೋಡೆಗೆ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲೇಬೇಕೆಂಬ ಪೋಸ್ಟರ್ ಅನ್ನು ಅಂಟಿಸಿರುವುದಾಗಿ ವರದಿ ಹೇಳಿದೆ.

ಘಟನೆ ಬಗ್ಗೆ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next