Advertisement

ಬಿಹಾರ: ನಕ್ಸಲರಿಂದ ರೈಲು ಸಂಚಾರಕ್ಕೆ ತಡೆ; ಕ್ಯಾಬಿನ್‌ ಸಿಬಂದಿ ಅಪಹರಣ

04:35 PM Aug 03, 2017 | Team Udayavani |

ಲಾಖೀಸರಾಯ್‌, ಬಿಹಾರ : ನಕ್ಸಲರು ಬಿಹಾರದ ಕಿಯೂಲ್‌ – ಝಂಝಾ ಮತ್ತು ಕಿಯೂಲ್‌ – ಜಮಾಲ್‌ಪುರ ಸೆಕ್ಷನ್‌ನಲ್ಲಿ ರೈಲು ಓಡಾಟಗಳಗೆ ತಡೆಯೊಡ್ಡಿದ್ದಾರೆ; ಇಬ್ಬರು ಕ್ಯಾಬಿನ್‌ ಸಿಬಂದಿಗಳನ್ನು ಅಪಹರಿಸಿದ್ದಾರೆ ಮತ್ತು ತಡೆಯಲು ಬಂದ ಪೊಲೀಸರ ವಿರುದ್ಧ ಗುಂಡಿನ ಕಾಳಗ ನಡೆಸಿದ್ದಾರೆ. 

Advertisement

ಸಹಾಯಕ ಪೊಲೀಸ್‌ ಸುಪರಿಂಟೆಂಡೆಂಟ್‌ ಪವನ್‌ ಕುಮಾರ್‌ ಉಪಾಧ್ಯಾಯ ತಿಳಿಸಿರುವ ಪ್ರಕಾರ, ನಕ್ಸಲರು ಸುಮಾರು 15ರಿಂದ 20ರ ಸಂಖ್ಯೆಯಲ್ಲಿದ್ದರು; ಕಿಯೂಲ್‌-ಝಂಝಾ ಸೆಕ್ಷನ್‌ನಲ್ಲಿ ಗೋಪಾಲಪುರ ರೈಲ್ವೇ ನಿಲುಗಡೆಯಲ್ಲಿ ಕ್ಯಾಬಿನ್‌ ಸಿಬಂದಿಗಳಿಬ್ಬರನ್ನು ಅಪಹರಿಸಿದರು.

ನಕ್ಸಲರ ಈ ದಾಳಿಯಿಂದ ರೈಲು ಸೇವೆ ನಿನ್ನೆ ಗುರುವಾರ ಮಧ್ಯರಾತ್ರಿಯಿಂದ ಇಂದು ಬೆಳಗ್ಗೆ 7 ಗಂಟೆಯ ವರೆಗೆ ತೀವ್ರವಾಗಿ ಬಾಧಿತವಾಯಿತೆಂದು ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next