Advertisement

ಸಾಗರ ದಾಳಿ ಹತ್ತಿಕ್ಕಲು ಸಜ್ಜು

01:08 AM Aug 27, 2019 | Team Udayavani |

ಪುಣೆ: ಪಾಕಿಸ್ತಾನದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯಲ್ಲಿ ಜಲಾಂತರ್ಗಾಮಿ ಪಡೆಯೊಂದಿದ್ದು, ಆ ತಂಡವು ಸಾಗರದೊಳಗೆ ಪ್ರಯಾಣಿಸಿ ಭಾರತದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದೆ. ಗುಪ್ತಚರ ಇಲಾಖೆಯು ಈ ನಿಟ್ಟಿನಲ್ಲಿ ಎಚ್ಚರಿಸಿದ್ದು, ಅಂಥ ದಾಳಿಗಳನ್ನು ಹತ್ತಿಕ್ಕಲು ನಾವು ಸನ್ನದ್ಧವಾಗಿದ್ದೇವೆ ಎಂದು ನೌಕಾಪಡೆಯ ಸಿಬ್ಬಂದಿ ವಿಭಾಗದ ಮುಖ್ಯಸ್ಥ ಅಡ್ಮಿರಲ್ ಕರಂಬೀರ್‌ ಸಿಂಗ್‌ ತಿಳಿಸಿದ್ದಾರೆ.’ಭಾರತೀಯ ಸಾಗರ ತೀರಗಳಲ್ಲಿ ಬದಲಾಗುತ್ತಿರುವ ಭದ್ರತಾ ಸ್ವರೂಪ’ ಎಂಬ ಕುರಿತಾದ ಉಪನ್ಯಾಸ ನೀಡಲು ಪುಣೆಗೆ ಆಗಮಿಸಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ವಿಚಾರ ತಿಳಿಸಿದ್ದಾರೆ. ಕರಾವಳಿ ಕಾವಲು ಹೊಣೆ ಹೊತ್ತಿರುವ ಎಲ್ಲಾ ಭದ್ರತಾ ಪಡೆಗಳಿಗೆ ಈ ಕುರಿತಂತೆ ಎಚ್ಚರಿಕೆ ರವಾನಿಸಲಾಗಿದೆ. ಸಾಗರದ ಮೂಲಕ ಆಗಬಹುದಾದ ದಾಳಿಗಳನ್ನು ತಡೆಯುವ ಬಗ್ಗೆ ಮಾರ್ಗಸೂಚಿಗಳನ್ನೂ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next