Advertisement

ಪ್ರಶ್ನೆ ಕೇಳಿದ್ದಕ್ಕೆ ಸದಸ್ಯನ ಮೇಲೆ ಹಲ್ಲೆ ಮಾಡಿ ಚೂರಿ ಇರಿಯಲು ಯತ್ನಿಸಿದ ಗ್ರಾ.ಪಂ.ಅಧ್ಯಕ್ಷ

03:23 PM Feb 28, 2022 | Team Udayavani |

ಬಂಟ್ವಾಳ : ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಬಂಟ್ವಾಳ ತಾಲೂಕಿನ ನಾವೂರ ಗ್ರಾಮ‌ ಪಂಚಾಯತ್ ಸದಸ್ಯನ ಮೇಲೆ ಆಧ್ಯಕ್ಷ ಹಲ್ಲೆ ನಡೆಸಿದ್ದಲ್ಲದೆ ಚೂರಿಯಿಂದ ಇರಿಯಲು ಯತ್ನಿಸಿದ ಘಟನೆ ಸೋಮವಾರ ನಡೆದಿದೆ.

Advertisement

ನಾವೂರ ಗ್ರಾ.ಪಂ.ಸದಸ್ಯ ಜನಾರ್ಧನ ಎಂಬವನ ಮೇಲೆ ಇಲ್ಲಿನ ಗ್ರಾ.ಪಂ.ಅಧ್ಯಕ್ಷ ಉಮೇಶ್ ಕುಲಾಲ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸೋಮವಾರ ಗ್ರಾಮ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಾಮಾಗಾರಿ ವಿಚಾರ ಹಾಗೂ ಬಿಲ್ ಪಾವತಿ ವಿಚಾರಕ್ಕೆ ಸಂಬಂಧಿಸಿ ಪ್ರಶ್ನೆ ಕೇಳಿದ್ದಾನೆ ಅಷ್ಟಕ್ಕೇ ಸಿಟ್ಟಿಗೆದ್ದ ಅಧ್ಯಕ್ಷ ಸದಸ್ಯನ ಮೇಲೆ ಹಲ್ಲೆ ನಡೆಸಿ ಬಳಿಕ ಚೂರಿಯಿಂದ ಇರಿಯಲು ಮುಂದಾಗಿದ್ದ ಈ ವೇಳೆ ಅಲ್ಲಿದ್ದ ಇತರ ಸದಸ್ಯರು ಮಧ್ಯ ಪ್ರವೇಶ ಮಾಡಿದ್ದರಿಂದ ಚೂರಿ ಇರಿತದಿಂದ ಬಚಾವ್ ಆಗಿದ್ದೇನೆ ಎಂದು ಹಲ್ಲೆ ಗೊಳಗಾದ ಸದಸ್ಯ ಜನಾರ್ದನ ತಿಳಿಸಿದ್ದಾರೆ.

ಸದಸ್ಯ ಜನಾರ್ಧನ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ : ಈ ಲಂಕಾ ಆಟಗಾರನನ್ನು ಯಾಕೆ ಐಪಿಎಲ್ ತಂಡಗಳು ಖರೀದಿ ಮಾಡಿಲ್ಲ..?: ಗಾವಸ್ಕರ್ ಅಚ್ಚರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next