Advertisement

ನಾವುಂದ ಗ್ರಾಮಸಭೆ: ಅಂಡರ್‌ಪಾಸ್‌ ನಿರ್ಮಾಣ; ಪರ-ವಿರೋಧ ಚರ್ಚೆ

02:56 PM Apr 01, 2017 | |

ಕುಂದಾಪುರ:  ನಾವುಂದ ಪಂಚಾಯತ್‌ ಗ್ರಾಮಸಭೆ ಗ್ರಾ.ಪಂ ಅಧ್ಯಕ್ಷ ನರಸಿಂಹ ದೇವಾಡಿಗ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ನಾವುಂದ ಅಂಡರ್‌ಪಾಸ್‌ ಪರ ಮತ್ತು ವಿರೋಧದಿಂದ ಸಾಕಷ್ಟು ಗೊಂದಲ ಉಂಟಾಯಿತು.ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಉಪನಿರೀಕ್ಷಕ ಬಿರ್ತಿರಾಜ್‌ 1 ಎಕರೆಗೆ 400 ಗಿಡಗಳನ್ನು ಅರಣ್ಯ ಇಲಾಖೆಯಿಂದ ನೀಡುವುದಾಗಿ ತಿಳಿಸಿದರು.

Advertisement

ನಾವುಂದದಲ್ಲಿ ಡಿಪೋ ಮಾಡ ಬೇಕೆಂದು ಸಾರ್ವಜನಿಕರು ಆಗ್ರಹಿಸಿ ದರು. ಕಾರ್ಯಕ್ರಮದಲ್ಲಿ  ಅರೆಹೊಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಹೇಮಲತಾ ಸಮಯೋಚಿತವಾಗಿ ಮಾತನಾಡಿದರು.ಮತ್ತು ನೋಡೆಲ್‌ ಅಧಿಕಾರಿ ಇಬ್ರಾಹಿಂ ಅವರು  ಪ್ರಶ್ನೆಗಳಿಗೆ ಉತ್ತರಿಸಿದರು.ಗ್ರಾ.ಪಂ. ಅಧ್ಯಕ್ಷ ನರಸಿಂಹ ದೇವಾಡಿಗ, ಉಪಾಧ್ಯಕ್ಷೆ ಜಯಂತಿ.ಡಿ, ತಾ.ಪಂ. ಸದಸ್ಯರಾದ ಮಹೇಂದ್ರ ಪೂಜಾರಿ, ಜಗದೀಶ ಪೂಜಾರಿ, ಪಶು ವೈದ್ಯ ಅರುಣ ಕುಮಾರ್‌, ಪಂ. ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ಸ್ವಾಗತಿಸಿ, ರಾಜು ಪೂಜಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next