Advertisement

ಹತ್ತು ತಿಂಗಳ ಸೆರೆವಾಸದ ಬಳಿಕ ನವಜೋತ್ ಸಿಂಗ್ ಸಿಧುಗೆ ಬಿಡುಗಡೆ ಭಾಗ್ಯ

06:44 PM Apr 01, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಇಂದು ಜೈಲಿನಿಂದ ಹೊರಬಂದಿದ್ದಾರೆ. ಪಟಿಯಾಲಾ ಜೈಲಿನಲ್ಲಿ ಹತ್ತು ತಿಂಗಳು ಶಿಕ್ಷೆ ಅನುಭವಿಸಿದ ಮಾಜಿ ಕ್ರಿಕೆಟಿಗ ಸಿಧುಗೆ ಇಂದು ಬಿಡುಗಡೆ ಭಾಗ್ಯ ಸಿಕ್ಕಿದೆ.

Advertisement

ಅವರು ಮಧ್ಯಾಹ್ನ ಜೈಲಿನಿಂದ ಬಿಡುಗಡೆಯಾಗುವ ನಿರೀಕ್ಷೆಯಿದ್ದರೂ, ಪ್ರಕ್ರಿಯೆಯು ಕೆಲವು ಗಂಟೆಗಳ ಕಾಲ ವಿಳಂಬವಾಯಿತು. ಅವರನ್ನು ಸ್ವಾಗತಿಸಲು ಬೆಂಬಲಿಗರು ಮತ್ತು ಕಾಂಗ್ರೆಸ್ ಮುಖಂಡರು ಜೈಲಿನ ಹೊರಗೆ ಜಮಾಯಿಸಿದ್ದರು.

ನವಜೋತ್ ಸಿಧು ಅವರನ್ನು ಸ್ವಾಗತಿಸಲು ಪಟಿಯಾಲಾ ನಗರದಲ್ಲಿ ಹಲವಾರು ಪೋಸ್ಟರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ಹಾಕಲಾಗಿದೆ.

1988ರಲ್ಲಿ ರಸ್ತೆ ಪ್ರಕರಣವೊಂದರಲ್ಲಿ ಸಿಧುಗೆ ಸುಪ್ರೀಂ ಕೋರ್ಟ್ ಒಂದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತು. ಅವರು ಮೇ 20, 2022 ರಂದು ಜೈಲಿಗೆ ಹೋದರು. ಆದರೆ ಅವರ ಜೈಲುವಾಸದ ಸಮಯದಲ್ಲಿ ಉತ್ತಮ ನಡವಳಿಕೆಯಿಂದಾಗಿ ನಿಗದಿತ ಸಮಯಕ್ಕೆ ಮೊದಲೇ ಬಿಡುಗಡೆಯಾಗಿದೆ ಎಂದು ಸಿಧು ಅವರ ವಕೀಲ ಎಚ್‌ಪಿಎಸ್ ವರ್ಮಾ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next