Advertisement

ಸಿಧು-ಕ್ಯಾ|ಸಿಂಗ್‌ ನಡುವಿನ ವಿರಸ ಉಲ್ಭಣ

06:48 AM May 20, 2019 | Team Udayavani |
ಲೂಧಿಯಾನಾ: ಪಂಜಾಬ್‌ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಮತ್ತು ಅವರ ಸಂಪುಟ ಸಚಿವ ನವಜೋತ್‌ ಸಿಂಗ್‌ ಸಿಧು ನಡುವಿನ ವಿರಸ ಮತ್ತಷ್ಟು ತಾರಕಕ್ಕೇರಿದೆ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯತ್ನಿಸಿದ್ದ ಸಿಧು ಅವರ ಪತ್ನಿಗೆ ಅಮರಿಂದರ್‌ ಅವರೇ ಟಿಕೆಟ್ ತಪ್ಪಿಸಿದ್ದು ಎಂದು ಹೇಳಿರುವ ಸಿಧು ಆರೋಪವನ್ನು ತಳ್ಳಿಹಾಕಿದ
ಕ್ಯಾ| ಅಮರೀಂದರ್‌ ಅವರು, ತಮ್ಮನ್ನು ಸಿಎಂ ಹುದ್ದೆಯಿಂದ ಪದಚ್ಯುತಿಗೊಳಿಸಲೆಂದೇ ಸಿಧು ಉದ್ದೇಶಪೂರ್ವಕವಾಗಿ ಇಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಲೋಕಸಭಾ ಚುನಾವಣೆಯ ಮತದಾನದ ಹೊಸ್ತಿಲಲ್ಲಿ ಅವರು ಕಾಂಗ್ರೆಸ್‌ ವಿರುದ್ಧ ಇಂಥ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ಪಕ್ಷದ ವರ್ಚಸ್ಸಿಗೆ ಕುಂದು ತರುತ್ತಿರುವ ಸಿಧು ವಿರುದ್ಧ ಪಕ್ಷದ ಹೈಕಮಾಂಡ್‌ ನಿರ್ಧರಿಸುತ್ತದೆ ಎಂದವರು ಹೇಳಿದರು.
Advertisement

Udayavani is now on Telegram. Click here to join our channel and stay updated with the latest news.

Next