Advertisement

ಹೋಂ ಸ್ಟೇ ದಾಳಿ ಪ್ರಕರಣ: ನವೀನ್‌ ಸೂರಿಂಜೆ ಮೇಲಿನ ಪ್ರಕರಣ ವಜಾ

10:55 AM Dec 06, 2018 | Team Udayavani |

ಮಂಗಳೂರು: 2012 ಜು.28ರಂದು ನಡೆದಿದ್ದ ಪಡೀಲ್‌ ಬಡ್ಲಗುಡ್ಡೆ ಮಾರ್ನಿಂಗ್‌ಮಿಸ್ಟ್‌ ಹೋಂಸ್ಟೇ ದಾಳಿ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದ ಪತ್ರಕರ್ತ ನವೀನ್‌ ಸೂರಿಂಜೆ ಮೇಲಿನ ಪ್ರಕರಣವನ್ನು ನಗರದ 6ನೇ ಹೆಚ್ಚುವರಿ ಜಿÇÉಾ ಮತ್ತು ಸತ್ರ ನ್ಯಾಯಾಲಯ ವಜಾಗೊಳಿಸಿದೆ.

Advertisement

ವರದಿಗಾಗಿ ತೆರಳಿದ್ದ ಪತ್ರಕರ್ತ ನವೀನ್‌ ಸೂರಿಂಜೆ ಮತ್ತು ಕೆಮರಾಮ್ಯಾನ್‌ ಶರಣ್‌ರಾಜ್‌ ಅವರು ದಾಳಿಯ ಮಾಹಿತಿ ಇದ್ದರೂ ಪೊಲೀಸರಿಗೆ ತಿಳಿಸಲಿಲ್ಲ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಸಂಬಂಧ ನವೀನ್‌  ನಾಲ್ಕೂವರೆ ತಿಂಗಳ ಜೈಲಲ್ಲಿದ್ದರು.ನವೀನ್‌ ಮೇಲಿನ ಪ್ರಕರಣವನ್ನು ಕೈಬಿಡಲು ಸರಕಾರವು ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ನವೀನ್‌ ಪರವಾಗಿ ದಿನೇಶ್‌ ಹೆಗ್ಡೆ ಉಳೆಪಾಡಿ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next