Advertisement
ನವರಾತ್ರಿ ಪ್ರಯುಕ್ತ ಉದಯವಾಣಿ ಹಮ್ಮಿಕೊಂಡಿದ್ದ ನವರೂಪ ಉತ್ಸವದಲ್ಲಿ ವಿಜೇತರಾದವರಿಗೆ ಮಂಗಳೂರಿನ ಬೆಸೆಂಟ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡಿದ ಅವರು, ನವರಾತ್ರಿ ದೇವಿಶಕ್ತಿಯ ಆರಾಧನೆ ಮಾತ್ರವಲ್ಲದೆ ನಾರೀಶಕ್ತಿ ಅನಾವರಣ ಕೂಡ ಆಗಿದೆ. ಒಂಬತ್ತು ದಿನಗಳಲ್ಲಿ ದೇವಿಯನ್ನು ವಿವಿಧ ರೂಪಗಳಲ್ಲಿ ಆರಾಧಿಸಲಾಗುತ್ತಿದೆ. ಪ್ರತಿದಿನ ಒಂದೊಂದು ಬಣ್ಣದ ಸೀರೆಯನ್ನು ತೊಡಿಸಲಾಗುತ್ತಿದೆ. ಈ ಒಂದೊಂದು ಬಣ್ಣ ಅದರದ್ದೆ ಆದ ಮಹತ್ವವನ್ನು ಹೊಂದಿದೆ. ಆದರ ಹಿಂದೆ ಆಧ್ಯಾತ್ಮಿಕ ನೆಲಗಟ್ಟಿನ ಸಂದೇಶಗಳಿವೆ. ನವರೂಪ ಉತ್ಸವ ಮಹಿಳೆಯರಿಗೆ ಇದರ ಮಹತ್ವದ ಅರಿವು ಮೂಡಿಸುವುದರ ಜತೆಗೆ ನವರಾತ್ರಿ ಉತ್ಸವವನ್ನು ಭಕ್ತಿಯ ಜತೆಗೆ ಸಂಭ್ರಮಿಸುವಂತೆ ಮಾಡಿದೆ ಎಂದರು.
Related Articles
Advertisement
ನವರೂಪ ವಿಜೇತರು ಪ್ರತಿಭಾ ಮತ್ತು ಬಳಗ, ಯು.ಎಸ್. ಮಲ್ಯ ನಗರ ಬಿಕರ್ನಕಟ್ಟೆ, ಸುಭಾಷ್ನಗರ ಫ್ರೆಂಡ್ಸ್ ಮೂಡುಬಿದಿರೆ, ಟೀಂ ನೀಲಾಂಬರಿ ಮಂಗಳೂರು. ಸುಶೀಲಾ ಮತ್ತು ಕುಟುಂಬ ಕಾಟಿಪಳ್ಳ, ಶುಭಾ ಎಸ್.ಎನ್. ಭಟ್ ಮತ್ತು ಬಳಗ ಮುಡಿಪು, ದಿವ್ಯಾಶ್ರೀ ಮತ್ತು ಬಳಗ ಪೆರ್ಲತ್ತಡ್ಕ ಕಾಸರಗೋಡು, ಲಕ್ಷ್ಮೀ ನಿವಾಸ ಕುಟುಂಬ ಬಲ್ಲಾಳ್ಬಾಗ್, ಚೇತನಾ, ಗೆಳತಿಯರು ಅಳಪೆ ಪಡೀಲ್, ಮಂಜುಳಾ ಮತ್ತು ಕುಟುಂಬ ಕುದ್ರೋಳಿ ಅವರಿಗೆ ವಿದ್ಯಾಶ್ರೀ ರಾಧಾಕೃಷ್ಣ ಅವರು ಬಹುಮಾನಗಳನ್ನು ಪ್ರದಾನ ಮಾಡಿದರು.
ಉದಯವಾಣಿ ಪ್ರಾದೇಶಿಕ ಪ್ರಬಂಧಕ ಸತೀಶ್ ಮಂಜೇಶ್ವರ ಬಹುಮಾನ ವಿಜೇತರ ವಿವರ ನೀಡಿದರು. ಸಹಾಯಕ ಪ್ರಬಂಧಕ ಉಮೇಶ್ ಎನ್. ಶೆಟ್ಟಿ ವಂದಿಸಿದರು.
ಹಿರಿಯ ವರದಿಗಾರ ದಿನೇಶ್ ಇರಾ ನಿರೂಪಿಸಿದರು. ಸಂಭ್ರಮಿಸಿದ್ದೇವೆ ಪ್ರಶಸ್ತಿ ವಿಜೇತರ ಪೈಕಿ ಗೀತಾ ವಿ. ಮೈಂದನ್ ಮಾತನಾಡಿ, ನವರಾತ್ರಿಯ ಸಂದರ್ಭ ಉದಯವಾಣಿ ಪ್ರಸ್ತುತಪಡಿಸಿರುವ ನವರೂಪ ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸಿದ್ದೇವೆ. ಸಂತೋಷ ಪಟ್ಟಿದ್ದೇವೆ. ಈ ರೀತಿಯ ಅವಕಾಶವನ್ನು ಓದುಗ ಬಳಗಕ್ಕೆ ಒದಗಿಸಿಕೊಟ್ಟ ಉದಯವಾಣಿ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ಈ ರೀತಿಯ ಇನ್ನಷ್ಟು ಉತ್ತಮ ಪರಿಕಲ್ಪನೆಗಳು ಮೂಡಿಬರಲಿ ಎಂದು ಹಾರೈಸುತ್ತೇನೆ ಎಂದು ನವರೂಪ ಉತ್ಸವ ಆಯೋಜನೆಗೆ ಹರ್ಷ ವ್ಯಕ್ತಪಡಿಸಿದರು.