Advertisement
ಪ್ರತಿ ವರ್ಷದಂತೆ ಈ ವರ್ಷವೂ ಇಲ್ಲಿನ ಮಹಿಳೆಯರು ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ಮೌನವಾಗಿ ಬನ್ನಿ ಮಹಾಕಾಳಿ ಕಟ್ಟೆಗೆ ಸುಮಾರ ನೂರಕ್ಕೂ ಹೆಚ್ಚು ಮಹಿಳೆಯರು ಹೋಗಿ ಪೂಜೆ ಸಲ್ಲಿಸುವ ವಿಶೇಷವಾದ ಮೌನವೃತಾಚರಣೆ ಆ. 15ರ ರವಿವಾರದಿಂದ ಆರಂಭವಾಗಿದೆ. ಸೋಮವಾರ ಬೆಳಗಿನ ಜಾವ ಗ್ರಾಮದಲ್ಲಿ ಮಹಿಳೆಯರು ಬೆಳಗಿನ ಮೌನವಾಗಿ ಬನ್ನಿ ಮಹಾಕಾಳಿ ಕಟ್ಟೆಗೆ ಆಚರಿಸುತ್ತಿರುವುದು ಕಂಡು ಬಂತು.
Related Articles
Advertisement
ನಂಬಿಕೆ: ಬ್ರಾಹ್ಮಿ ಮಹೂರ್ತದಲ್ಲಿ ಮೌನವೃತ ಆಚರಿಸಿ ಬನ್ನಿಮಹಾಕಾಳಿಗೆ ಪೂಜೆ ಸಲ್ಲಿಸುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ಹಿಂದೂ ಧರ್ಮದ ಶ್ರೇಷ್ಟವಾದ ನಂಬಿಕೆಯಾಗಿದೆ. ಈ ದಿನಗಳಂದು ಬನ್ನಿಮಹಾಕಾಳಿಗೆ ಹರಕೆ ಕಟ್ಟುವುದರಿಂದ ಖಂಡಿತವಾಗಿ ಒಳ್ಳೆಯದಾಗುತ್ತದೆ ಎಂಬುದು ಭಕ್ತರ ಬಲವಾದ ನಂಬಿಕೆಯಾಗಿದೆ.
ಈ ಮೌನವೃತಾಚರಣೆ ಈ ಗ್ರಾಮಗಳಲ್ಲಿ ಸುಮಾರು 15-20 ವರ್ಷಗಳಿಂದ ಆಚರಣೆಯಲ್ಲಿದೆ. ಈ ವೃತಾಚರಣೆಯಿಂದ ಗ್ರಾಮದ ಹಲವಾರು ಜನರಿಗೆ ಒಳಿತಾಗಿರುವ ಉದಾಹರಣೆಗಳಿವೆ. ಮಹಿಳೆಯರು ತಮ್ಮ ಗಂಡಂದಿರ ಒಳಿತಿಗಾಗಿ ಪೂಜೆ ಸಲ್ಲಿಸಿದರೇ, ಯುವತಿಯರು ಕಂಕಣಭಾಗ್ಯ ದೊರೆತು ಉತ್ತಮ ಜೀವನ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ. ಇನ್ನೂ ಮಕ್ಕಳು ಒಳ್ಳೆಯ ವಿಧ್ಯಾಬ್ಯಾಸ ತಮ್ಮದಾಗಲಿ ಎಂದು ಪ್ರಾರ್ಥಿಸುತ್ತಾರೆ.
ಮೊದಲೆಲ್ಲಾ ಕೆಲವೇ ಕೆಲವು ಜನರಿಂದ ಪ್ರಾರಂಭವಾದ ಈ ಆಚರಣೆ ಬರಬರುತ್ತಾ ನಂಬಿಕೆ ಬಲವಾದ ಕಾರಣ ಊರಿನ ಪ್ರತಿಮನೆಯಿಂದ ಒಬ್ಬರಾದರೂ ಮೌನಾಚರಣೆ ಮೂಲಕ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ.
ವರದಿ: ಮಲ್ಲಿಕಾರ್ಜುನ ಮೆದಿಕೇರಿ, ದೋಟಿಹಾಳ