Advertisement

ಜಾತಿ ಪ್ರಮಾಣಪತ್ರ ಅಸಿಂಧು ಪ್ರಕರಣ : ಸಂಸದೆ ಕೌರ್‌ಗೆ ಸುಪ್ರೀಂ ನೆಮ್ಮದಿ

08:06 AM Jun 23, 2021 | Team Udayavani |

ಹೊಸದಿಲ್ಲಿ: ಮಹಾರಾಷ್ಟ್ರದ ಅಮರಾವತಿಯ ಲೋಕಸಭಾ ಸದಸ್ಯೆ ನವನೀತ್‌ ಕೌರ್‌ ರಾಣಾ ಅವರಿಗೆ ನೆಮ್ಮದಿ ಸಿಕ್ಕಿದೆ.

Advertisement

ಅವರು ಸಲ್ಲಿಸಿದ್ದ ಜಾತಿ ಪ್ರಮಾಣಪತ್ರ ಅಸಿಂಧು ಎಂದು ಬಾಂಬೆ ಹೈಕೋರ್ಟ್‌ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ತಡೆಯಾಜ್ಞೆ ನೀಡಿದೆ. ಖ್ಯಾತ ನ್ಯಾಯವಾದಿ ಮುಕುಲ್‌ ರೋಹಟಗಿ ಸಂಸದೆ ಪರ ವಾದಿಸಿದರು.

ನ್ಯಾ|ವಿನೀತ್‌ ಶರಣ್‌ ಮತ್ತು ನ್ಯಾ|ದಿನೇಶ್‌ ಮಹೇಶ್ವರಿ ಅವರನ್ನೊಳಗೊಂಡ ಪೀಠ ಮಹಾರಾಷ್ಟ್ರ ಸರಕಾರ, ಜಿಲ್ಲಾ ಜಾತಿ ಪ್ರಮಾಣ ಪತ್ರ ಪರಿಶೀಲನ ಪ್ರಾಧಿಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಜೂ.9ರಂದು ಬಾಂಬೆ ಹೈಕೋರ್ಟ್‌ ಸಂಸದೆಗೆ 2 ಲಕ್ಷ ರೂ.ದಂಡ ಕೂಡ ವಿಧಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next