Advertisement
ಅವಿಸ್ಮರಣೀಯ ಛಾಪುಭಾರತ ಹಾಗೂ ವಿಶ್ವ ಹಾಕಿಯಲ್ಲಿ ಧ್ಯಾನ್ಚಂದ್ ಮೂಡಿಸಿದ ಛಾಪು ಅವಿಸ್ಮರಣೀಯ. ಅದು ಕೇವಲ ಹಾಕಿಪಟುಗಳಿಗಷ್ಟೇ ಅಲ್ಲ, ಎಲ್ಲ ಕ್ರೀಡಾಪಟುಗಳಿಗೂ ಸ್ಫೂರ್ತಿ. ಕ್ರಿಕೆಟಿಗೆ ಬ್ರಾಡ್ಮನ್, ತೆಂಡುಲ್ಕರ್ ಹೇಗೋ, ಹಾಕಿಗೆ ಧ್ಯಾನ್ಚಂದ್. ಅವರಿಲ್ಲದೆ ಹಾಕಿ ಪರಿಪೂರ್ಣವಾಗದು. ಒಲಿಂಪಿಕ್ಸ್ ಹಾಕಿ ಎಂದೊಡನೆ ಅಲ್ಲಿ ಧ್ಯಾನ್ಚಂದ್ ಅವರದೇ ಒಂದು ಪ್ರತ್ಯೇಕ ಅಧ್ಯಾಯ. ಭಾರತದ 3 ಒಲಿಂಪಿಕ್ ಚಿನ್ನದ ಬೇಟೆಯ ವೇಳೆ ಧ್ಯಾನ್ಚಂದ್ ತಂಡದಲ್ಲಿದ್ದರು (1928, 1932, 1936). 1964ರ ತನಕ ಸತತ 8 ಒಲಿಂಪಿಕ್ ಚಿನ್ನವನ್ನು ಬೇಟೆಯಾಡಲು ಭಾರತಕ್ಕೆ ಧ್ಯಾನ್ಚಂದ್ ಅವರೇ ಮುಹೂರ್ತವಿರಿಸಿದ್ದನ್ನು ಮರೆಯುವಂತಿಲ್ಲ.
“ನಮ್ಮೆಲ್ಲರ ಪಾಲಿಗೆ ಧ್ಯಾನ್ಚಂದ್ ದೇವರಾಗಿದ್ದಾರೆ. ಅಂಥ ಅಮೋಘ ಆಟಗಾರ ಹಾಗೂ ಶ್ರೇಷ್ಠ ವ್ಯಕ್ತಿಯನ್ನು ಪಡೆಯುವುದು ಕಷ್ಟ. ಅವರೋರ್ವ ಪರಿಪೂರ್ಣ ಆಟಗಾರ. ಅವರು ಭಾರತರತ್ನಕ್ಕೆ ಅತ್ಯಂತ ಯೋಗ್ಯರು’ ಎಂಬುದಾಗಿ ಮಾಜಿ ಹಾಕಿಪಟು, 83 ವರ್ಷದ ಗುರುಬಕ್ಸ್ ಸಿಂಗ್ ಹೇಳಿದ್ದಾರೆ. 1980ರ ಬಳಿಕ ದೂರವಾದ ಒಲಿಂಪಿಕ್ಸ್ ಚಿನ್ನವನ್ನು ನಾವು ಮರಳಿ ಸಂಪಾದಿಸಬೇಕು ಎಂಬ ಬಯಕೆಯನ್ನೂ ವ್ಯಕ್ತಪಡಿಸಿದ್ದಾರೆ.
Related Articles
Advertisement
ಆ. 15ರಂದೇ ಅರಳಿದ ಧ್ವಜ!ಬ್ರಿಟಿಷ್ ದಬ್ಟಾಳಿಕೆಯನ್ನು ಕಡೆಗಣಿಸಿ 1936ರ ಬರ್ಲಿನ್ ಒಲಿಂಪಿಕ್ಸ್ ವೇಳೆ ಭಾರತದ ಧ್ವಜವನ್ನು ಸೂಟ್ಕೇಸ್ನಲ್ಲಿ ಹಾಕಿಕೊಂಡು ಹೋದ ದೇಶಪ್ರೇಮಿ ಧ್ಯಾನ್ಚಂದ್. ಭಾರತ ಅಂದಿನ ಫೈನಲ್ನಲ್ಲಿ ಹಿಟ್ಲರ್ ಸಮ್ಮುಖದಲ್ಲೇ ಜರ್ಮನಿಯನ್ನು 8-1ರಿಂದ ಕೆಡವಿತ್ತು. ಮಳೆಯಿಂದ ಅಂಗಳ ಜಾರುತ್ತಿದ್ದ ಕಾರಣ, ಶೂ ಕಳಚಿಟ್ಟು ಬರಿಗಾಲಲ್ಲಿ ಆಡಿದ ಧ್ಯಾನ್ಚಂದ್ 3 ಗೋಲು ಸಿಡಿಸಿದ್ದನ್ನು ಮರೆಯಲಾಗದು. ಚಿನ್ನ ಗೆದ್ದ ಬಳಿಕ ಕ್ರೀಡಾಗ್ರಾಮದಲ್ಲಿ ಅವರು ಭಾರತದ ಧ್ವಜವನ್ನು ಹಾರಿಸಿದ್ದರು. ಕಾಕತಾಳೀಯವೆಂದರೆ, ಅಂದು ಆಗಸ್ಟ್ 15 ಆಗಿತ್ತು!