Advertisement

Theft: ಮಹಿಳೆಯ ಕೊಂದು ಚಿನ್ನದ ಸರ ದೋಚಿದ

11:57 AM May 12, 2024 | Team Udayavani |

ಬೆಂಗಳೂರು: ಒಂಟಿಯಾಗಿದ್ದ ಮಹಿಳೆಯ ಮನೆಗೆ ನುಗ್ಗಿದ ದುಷ್ಕರ್ಮಿಯೊಬ್ಬ ಆಕೆಯ ಕತ್ತು ಹಿಸುಕಿ ಕೊಲೆಗೈದು, ಬಳಿಕ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಕೆಂಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಕೆಂಗೇರಿಯ ಕೋನಸಂದ್ರ ನಿವಾಸಿ ದಿವ್ಯಾ (36) ಕೊಲೆಯಾದ ಮಹಿಳೆ.

ಶುಕ್ರವಾರ ಮಧ್ಯಾಹ್ನ 1ಗಂಟೆಯಿಂದ 2 ಗಂಟೆ ನಡುವೆ ಈ ಕೃತ್ಯ ನಡೆದಿದೆ. ಮೃತಳ ಪತಿ ಗುರು ಮೂರ್ತಿ ಮಧ್ಯಾಹ್ನ ಪತ್ನಿಗೆ ಕರೆ ಮಾಡಿ ದಾಗ ಕರೆ ಸ್ವೀಕರಿಸಿಲ್ಲ. ಅನು ಮಾನಗೊಂಡು ಮನೆಗೆ ಬಂದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು. ಗುರುಮೂರ್ತಿ ಮತ್ತು ದಿವ್ಯಾ 3 ವರ್ಷಗಳ ಹಿಂದೆಯೇ ಮದುವೆಯಾಗಿದ್ದು, ದಂಪತಿಗೆ 2 ವರ್ಷದ ಮಗುವಿದೆ. ಗುರುಮೂರ್ತಿ ಕಟಿಂಗ್‌ ಶಾಪ್‌ ನಡೆಸುತ್ತಿದ್ದಾರೆ. ದಿವ್ಯಾ ಮಗುವನ್ನು ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದರು. ಶುಕ್ರವಾರ ಎಂದಿನಂತೆ ಕಟಿಂಗ್‌ ಶಾಪ್‌ಗೆ ಹೋದ ಗುರುಮೂರ್ತಿ, ಮಧ್ಯಾಹ್ನ ಪತ್ನಿ ದಿವ್ಯಾಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ, ಕರೆ ಸ್ವೀಕರಿಸಿಲ್ಲ. ಅದರಿಂದ ಅನುಮಾನಗೊಂಡು ಮನೆಗೆ ಬಂದು ನೋಡಿದಾಗ ದಿವ್ಯಾ ಕೊಲೆಯಾಗಿರುವುದು ಗೊತ್ತಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆ ಮುಗಿಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಮನೆಯಲ್ಲಿ ದಿವ್ಯಾ ಒಬ್ಬರೇ ಇರುವುದರ ಬಗ್ಗೆ ತಿಳಿದುಕೊಂಡು ಕೃತ್ಯವೆಸಗಿರುವ ಸಾಧ್ಯತೆಯಿದೆ. ಕೊಲೆ ಬಳಿಕ ದುಷ್ಕರ್ಮಿಯ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ದುಷ್ಕರ್ಮಿ ಕಳ್ಳತನಕ್ಕೆ ಬಂದು ಕೊಲೆ ಮಾಡಿದ್ದಾನೆಯೇ ಅಥವಾ ಬೇರೆ ಏನಾದರೂ ಕಾರಣವಿದೆಯೇ? ಎಂಬುದು ತನಿಖೆಯಿಂದ ಗೊತ್ತಾಗಲಿದೆ.

ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಲಾಗುತ್ತಿದೆ. ಕೊಲೆಗಾರನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

Advertisement

ಈ ಸಂಬಂಧ ಕೆಂಗೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿಯ ಹತ್ಯೆ ವೇಳೆ ಮಗು ಮಲಗಿತ್ತು: ಮನೆಯಲ್ಲಿ ದಿವ್ಯಾ ಮತ್ತು ಎರಡು ವರ್ಷದ ಮಗುವಿತ್ತು. ದುಷ್ಕರ್ಮಿ ಮನೆಗೆ ನುಗ್ಗಿ ದಿವ್ಯಾಳ ಕೊಲೆ ಮಾಡುವಾಗ ಮಗು ನಿದ್ದೆಯಲ್ಲಿತ್ತು. ತಂದೆ ಗುರುಮೂರ್ತಿ ಮನೆಗೆ ಬಂದಾಗಲೂ ಮಗು ಮಲಗಿತ್ತು. ಆದರೆ, ದಿವ್ಯಾ ಕೊಲೆಯಾಗಿದ್ದರು ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next