Advertisement
ವಿವಿಧೆಡೆಗಳಲ್ಲಿ ಬಿಜೆಪಿ ಕಾರ್ಯಕರ್ತರು ನಿಷೇಧಾಜ್ಞೆಯನ್ನು ಲೆಕ್ಕಿಸದೆ ಮೆರವಣಿಗೆ ಮಾಡಿದ್ದಾರೆ. ಬಸ್ಸಿಗೆ ಕಲ್ಲೆಸೆದ , ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದ ಘಟನೆಗಳು ವರದಿಯಾಗಿವೆ. ಕೆಎಸ್ಆರ್ಟಿಸಿ ಬಸ್ಗಳು ಮತ್ತು ಖಾಸಗಿ ಬಸ್ಗಳು ರಸ್ತೆಗಿಳಿಯಲಿಲ್ಲ. ಕೆಲವು ಖಾಸಗಿ ವಾಹನಗಳು ಮಾತ್ರ ಓಡಾಡಿವೆ. ದೂರದೂರುಗಳಿಂದ ಬಂದ ಪ್ರಯಾಣಿಕರಿಗೆ ಬಂದ್ನಿಂದಾಗಿ ಸಮಸ್ಯೆಯಾಯಿತು. ಬಸ್ ಮತ್ತು ಸಾರ್ವಜನಿಕ ವಾಹನಗಳು ಇಲ್ಲದ ಕಾರಣ ಜನರು ರೈಲು ಮತ್ತು ವಿಮಾನ ನಿಲ್ದಾಣದಲ್ಲಿ ತಾಸುಗಟ್ಟಲೆ ಕಾಯಬೇಕಾಯಿತು.
Related Articles
Advertisement
ರಾಷ್ಟ್ರೀಯ ಮಾನವಾಧಿಕಾರಗಳ ಆಯೋಗ, ಪ್ರಧಾನ ಮಂತ್ರಿ ಕೇಂದ್ರ ಗೃಹ ಸಚಿವರಿಗೆ ದೂರು ನೀಡಲು ಬಿಜೆಪಿ ತೀರ್ಮಾನಿಸಿದೆ. ಆದರೆ ರಾಜೇಶ್ ಹತ್ಯೆ ತನ್ನ ಕಾರ್ಯಕರ್ತರ ಕೃತ್ಯವಲ್ಲ ಎಂದು ಸಿಪಿಎಂ ಸ್ಪಷ್ಟನೆ ನೀಡಿದೆ. ಈ ಕೃತ್ಯದಲ್ಲಿ ಸಿಪಿಎಂ ಪಾತ್ರವಿಲ್ಲ. ಸ್ಥಳೀಯ ಮನಸ್ತಾಪದಿಂದಾಗಿ ಕೃತ್ಯ ಸಂಭವಿಸಿದೆ. ಆದರೆ ಬಿಜೆಪಿ ಎಲ್ಲ ಕೃತ್ಯಗಳನ್ನು ಸಿಪಿಎಂ ತಲೆಗೆ ಕಟ್ಟುತ್ತಿದೆ ಎಂದು ಸಿಪಿಎಂ ತಿರುವನಂತಪುರ ಜಿಲ್ಲಾ ಕಾರ್ಯದರ್ಶಿ ಅಣವೂರು ನಾಗಪ್ಪನ್ ಹೇಳಿದ್ದಾರೆ.
ರಾಜನಾಥ್ ಕಳವಳ: ಇದೇ ವೇಳೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಫೋನ್ ಮೂಲಕ ಸಂಪರ್ಕಿಸಿ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿ ಇದು ಎಷ್ಟು ಮಾತ್ರಕ್ಕೂ ಸಮ್ಮತವಲ್ಲ ಎಂದಿದ್ದಾರೆ.
ರಾಜೇಶ್ ಹತ್ಯೆಯಾದ ಘಟನೆ ಬಳಿಕ ಪಿಣರಾಯಿಗೆ ಕರೆ ಮಾಡಿದ ರಜನಾಥ್ ಹತ್ಯೆ ಮತ್ತು ಹಿಂಸೆಯನ್ನು ನಿಲ್ಲಿಸಲು ತಕ್ಷಣ ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಪಿಣರಾಯಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸಾಚಾರಕ್ಕೆ ಸ್ಥಳವಿಲ್ಲ ಎನ್ನುವುದನ್ನು ತಿಳಿಸಿದ್ದೇನೆ. ಕೇರಳದ ಕಾನೂನು ಮತ್ತು ಶಿಸ್ತು ಪಾಲನೆ ಹದಗೆಟ್ಟಿರುವ ಕುರಿತು ಮುಖ್ಯಮಂತ್ರಿಯ ಗಮನ ಸೆಳೆದಿದ್ದೇನೆ ಎಂದು ರಾಜನಾಥ್ ಹೇಳಿದ್ದಾರೆ.
ಚೆನ್ನಿತ್ತಲ ಪ್ರತಿಭಟನೆ : ವಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಮತ್ತು ಕೆಪಿಸಿಸಿ ಅಧ್ಯಕ್ಷ ಎಂ. ಎಂ. ಹಸನ್ ಕೋಝಿಕ್ಕೋಡ್ನಲ್ಲಿ ರಾಜಕೀಯ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸಿಪಿಎಂ ಮತ್ತು ಬಿಜೆಪಿ ರಕ್ತದಾಹದಿಂದಾಗಿ ಕೇರಳಕ್ಕೆ ಕೆಟ್ಟ ಹೆಸರು ಬಂದಿದೆ. ಎರಡೂ ಪಕ್ಷಗಳು ಹಿಂಸಾಚಾರವನ್ನು ನಿಲ್ಲಿಸಬೇಕೆಂದು ಚೆನ್ನಿತ್ತಲ ಹೇಳಿದ್ದಾರೆ.
10 ಮಂದಿ ಕಸ್ಟಡಿಗೆ, ವಾಹನ ವಶಕ್ಕೆಆರ್ಎಸ್ಎಸ್ ಇಡಲಕ್ಕೋಡಾಟ್ ಶಾಖೆಯ ಕಾರ್ಯವಾಹ ತಿರುವನಂತಪುರ ಕಲ್ಲಂಬಳ್ಳಿ ವಿನಾಯಕ ನಗರದ ಕುನ್ನಿಲ್ ವೀಟಿಲ್ ರಾಜೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ತಿರುವನಂತಪುರ ಪೊಲೀ ಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ಮುಖ್ಯ ಆರೋ ಪಿಯ ಮನೆಗೆ ಪೊಲೀಸರು ಮುತ್ತಿಗೆ ಹಾಕಿದಾಗ ಆತ ಅಲ್ಲಿಂದ ತಪ್ಪಿಸಿಕೊಂಡು ಇಗರ್ಜಿಗೆ ಓಡಿ ಹೋಗಿದ್ದಾನೆ. ಇಗರ್ಜಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದವರು ಈತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು ಈತ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆಂದೂ ಗೂಂಡಾ ಕಾನೂನು ಪ್ರಕಾರವೂ ಈತನನ್ನು ಈ ಹಿಂದೆ ಬಂಧಿಸಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕೊಲೆಗೈ ಯಲು ಬಂದ ವಾಹನವೊಂದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಪಿಎಂ ಕಾರ್ಯಕರ್ತರನ್ನು ರಕ್ಷಿಸುವ ಯತ್ನ: ಬಿಜೆಪಿ
ಆದರೆ ಬಿಜೆಪಿ ಇದನ್ನು ಅಲ್ಲಗಳೆದಿದ್ದು, ಸರಕಾರ ಸಿಪಿಎಂ ಕಾರ್ಯಕರ್ತರನ್ನು ಬಚಾವು ಮಾಡಲು ಪುಡಿ ರೌಡಿಗಳನ್ನು ಬಂಧಿಸಿದೆ ಎಂದು ಆರೋಪಿಸಿದೆ.