Advertisement

ಚಿತ್ರನಟಿ ತಾರಾಗೆ ರಾಷ್ಟ್ರೀಯ ನಾಟಕ ಪ್ರಶಸ್ತಿ

10:47 PM Dec 28, 2021 | Team Udayavani |

ಚಿತ್ರದುರ್ಗ: ಇಲ್ಲಿನ ಮುರುಘ ರಾಜೇಂದ್ರ ಬೃಹನ್ಮಠದಿಂದ ನೀಡುವ ಪ್ರತಿಷ್ಠಿತ ಶಿಮುಶ ರಾಷ್ಟ್ರೀಯ ನಾಟಕ ಪ್ರಶಸ್ತಿಗೆ ಚಿತ್ರನಟಿ ಹಾಗೂ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಭಾಜನರಾಗಿದ್ದಾರೆ.

Advertisement

ಪ್ರಶಸ್ತಿ ಒಂದು ಲಕ್ಷ ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದ್ದು, ಜ. 1ರಿಂದ 4ರ ವರೆಗೆ ಮುರುಘಾ ಮಠದಲ್ಲಿ ನಡೆಯಲಿರುವ ಜಮುರಾ ರಾಷ್ಟ್ರೀಯ ನಾಟಕೋತ್ಸವದಲ್ಲಿ ಡಾ| ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಮುರುಘಾ ಮಠದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next