Advertisement

ರಾಷ್ಟ್ರೀಯವಾದಿಗಳ ನಿಗೂಢ ಸಾವಿನ ಬಗ್ಗೆ ಬರಲಿದೆ ಸಿನಿಮಾ

03:26 PM Feb 24, 2018 | Team Udayavani |

ನವದೆಹಲಿ: ಶ್ಯಾಮ ಪ್ರಸಾದ್‌ ಮುಖರ್ಜಿ, ದೀನದಯಾಳ ಉಪಾಧ್ಯಾಯ ಸೇರಿದಂತೆ ಹಲವು ಹಿಂದೂ ರಾಷ್ಟ್ರೀಯವಾದಿ ನಾಯಕರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಸಿನಿಮಾ ನಿರ್ಮಿಸಲು ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾ ನಿರ್ದೇಶಕ ಉಜ್ವಲ್‌ ಚಟರ್ಜಿ ನಿರ್ಧರಿಸಿದ್ದಾರೆ. ಅಲ್ಲದೆ ಜನ ಸಂಘದ ಮಾಜಿ ಮುಖ್ಯಸ್ಥ ರಘು ವೀರ್‌ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿಯವರ ಸಾವಿನ ಬಗ್ಗೆಯೂ ಸಿನಿಮಾದಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದಿದ್ದಾರೆ.

Advertisement

ಕಾಂಗ್ರೆಸ್‌ನ ಸಿದ್ಧಾಂತಗಳನ್ನು ಒಪ್ಪದವರನ್ನು ರಷ್ಯಾದ ಗುಪ್ತಚರ ಸಂಸ್ಥೆ ಕೆಜಿಬಿ ನೆರವಿನಿಂದ ಹತ್ಯೆಗೈಯಲಾಗಿದೆ ಎಂದು ನಿರ್ದೇಶಕ ಚಟರ್ಜಿ ಹೇಳಿದ್ದಾರೆ. ಸಿನಿಮಾದ ಕಥೆಯನ್ನು ಅತುಲ್‌ ಗಂಗ್ವಾರ್‌ ಬರೆಯುತ್ತಿದ್ದು, ಗಣ್ಯರ ಸಾವಿನ ಪ್ರಕರಣದ ಸನ್ನಿವೇಶಗಳ ಸಮಗ್ರ ಅಧ್ಯಯನ
ನಡೆಸುತ್ತಿದ್ದಾರೆ. ಕೆಜಿಬಿಗೆ ಶಾಸ್ತ್ರಿ ಸಹಕರಿಸುತ್ತಿರಲಿಲ್ಲ. ಹೀಗಾಗಿ ಅವರನ್ನೂ ಹತ್ಯೆಗೈಯಲಾಗಿದೆ. ಇವೆಲ್ಲವೂ ರಾಜಕೀಯ ಹತ್ಯೆಗಳಾಗಿದ್ದು, ಸಹಜ ಹತ್ಯೆ ಎಂಬಂತೆ ಬಿಂಬಿಸಲಾಗಿದೆ ಎಂದು ನಿರ್ದೇಶಕ ಚಟರ್ಜಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next