Advertisement

ಕೆಎಸ್‌ಆರ್‌ಟಿಸಿ ಉಪಕ್ರಮಕ್ಕೆ ರಾಷ್ಟ್ರೀಯ ಪ್ರಶಸ್ತಿ

06:25 AM Dec 22, 2017 | Team Udayavani |

ಬೆಂಗಳೂರು: ಕೆಎಸ್‌ಆರ್‌ಟಿಸಿ ಪರಿಚಯಿಸಿದ “ವಾಹನ ಟ್ರ್ಯಾಕಿಂಗ್‌ ಮತ್ತು ಮಾನಿಟರಿಂಗ್‌ ಪ್ಯಾಸೆಂಜರ್‌ ಇನ್‌ಫಾರ್ಮೇಷನ್‌ ಸಿಸ್ಟ್‌ಂ’ ಉಪಕ್ರಮಕ್ಕೆ “ಬ್ಯುಸಿನೆಸ್‌ ವರ್ಲ್ಡ್ ಸ್ಮಾರ್ಟ್‌ ಸಿಟೀಸ್‌ ರಾಷ್ಟ್ರೀಯ ಪ್ರಶಸ್ತಿ’ ಲಭಿಸಿದೆ.

Advertisement

ದೇಶದ ಸಾರ್ವಜನಿಕ ಸಾರಿಗೆ ಸೇವೆಯಲ್ಲಿ ಈ ವ್ಯವಸ್ಥೆ ಅಳವಡಿಸಿದ ಮೊದಲ ಸಂಸ್ಥೆ ಕೆಎಸ್‌ಆರ್‌ಟಿಸಿ ಆಗಿದ್ದು,
ಎರಡು ಸಾವಿರ ಬಸ್‌ಗಳಲ್ಲಿ ಅನುಷ್ಠಾನಗೊಳಿಸಲಾಗಿದೆ.

ಇದರಿಂದ ಪ್ರಯಾಣಿಕರಿಗೆ ಸಂವಹನ ವ್ಯವಸ್ಥೆ, ಜಿಪಿಎಸ್‌ ಆಧಾರಿತ ಬಸ್‌ಗಳ ಆಗಮನ- ನಿರ್ಗಮನ ಕುರಿತು ಮಾಹಿತಿ ದೊರೆಯಲಿದೆ. ದೆಹಲಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಅವರು ಕೇಂದ್ರ ನಗರಾಭಿವೃದಿಟಛಿ ಸಚಿವ ಹದೀìಪ್‌ ಸಿಂಗ್‌ ಪುರಿ ಅವರಿಂದ ಈ ಪ್ರಶಸ್ತಿ ಸ್ವೀಕರಿಸಿದರು. ತೆಲಂಗಾಣದ ಮಾಹಿತಿ ತಂತ್ರಜ್ಞಾನ ಮತ್ತು ಪೌರಾಡಳಿತ ಸಚಿವ
ಕೆ.ಟಿ.ರಾಮರಾವ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next