Advertisement

ದೇಶದ ಅಂತರ್ಜಲ ಮಟ್ಟ ಕಾಪಾಡುವಲ್ಲಿ ರೈತರೂ ಕೈ ಜೋಡಿಸಬೇಕು

11:33 AM Dec 26, 2019 | sudhir |

ನವದೆಹಲಿ: “”ದೇಶದ ಅಂತರ್ಜಲ ಮಟ್ಟ ಕಾಪಾಡುವಲ್ಲಿ ರೈತರೂ ಕೈ ಜೋಡಿಸಬೇಕು. ಕಡಿಮೆ ನೀರು ಪಡೆಯುವ ಕೃಷಿಪದ್ಧತಿಗಳನ್ನು ಹಾಗೂ ಕಡಿಮೆ ನೀರಿನಲ್ಲಿ ಹೆಚ್ಚು ಇಳುವರಿ ನೀಡುವಂಥ ಬೆಳೆಗಳನ್ನು ಬೆಳೆವ ಮೂಲಕ ಅಂತರ್ಜಲ ಸಂರಕ್ಷಣೆಗೆ ಕಾಣಿಕೆ ನೀಡಬೇಕು ಎಂದು ದೇಶದ ರೈತರಿಗೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Advertisement

ಮಾಜಿ ಪ್ರಧಾನಿ ಅಟಲ್‌ ಅವರ 95ನೇ ಹುಟ್ಟುಹಬ್ಬದ ಪ್ರಯುಕ್ತ ಸರ್ಕಾರ ಜಾರಿಗೊಳಿಸಿದ ಅಟಲ್‌ ಜಲ ಯೋಜನೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಅಂತರ್ಜಲ ಪ್ರಮಾಣ ಗಣನೀಯವಾಗಿ ಕುಸಿದಿರುವ ಕರ್ನಾಟಕ ಸೇರಿ 7 ರಾಜ್ಯಗಳ ಸುಮಾರು 8,300 ಹಳ್ಳಿಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ.

“”ರೈತರು ತಮ್ಮಲ್ಲಿನ ಪುರಾತನ ಕೃಷಿ ಪದ್ಧತಿ ಕೈಬಿಟ್ಟು, ಹೊಸ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು. ಕಬ್ಬನ್ನು ಬೆಳೆವ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚು ಕುಸಿದಿರುವುದು ಬೆಳಕಿಗೆ ಬಂದಿದೆ. ಹೀಗಾಗಿ, ಕಬ್ಬು ಬೆಳೆಯುವ ರೈತರು ಮಳೆ ಕೊಯ್ಲು, ಸೂಕ್ಷ್ಮ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು. ಕಬ್ಬಿನ ಬದಲು ಇತರ ಲಾಭದಾಯಕ ವಾಣಿಜ್ಯ ಬೆಳೆ ಆಯ್ಕೆ ಮಾಡಿದರೆ ಉತ್ತಮ” ಎಂದರು.

ಇದೇ ವೇಳೆ, “”ನೀರಿನ ಸಂಪರ್ಕವಿಲ್ಲದ 18 ಕೋಟಿ ಮನೆಗಳಲ್ಲಿ 3 ಕೋಟಿ ಮನೆಗಳಿಗಷ್ಟೇ 70 ವರ್ಷಗಳಲ್ಲಿ ನೀರಿನ ಸಂಪರ್ಕ ನೀಡಲಾಗಿತ್ತು. ಜಲ ಜೀವನ ಮಿಷನ್‌ ಮೂಲಕ 15 ಕೋಟಿ ಮನೆಗಳಿಗೆ ನೀರಿನ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next