Advertisement

ನಾರಾಯಣಪುರ ಬಲದಂಡೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ನಾಶ

09:37 AM Sep 22, 2019 | Sriram |

ರಾಯಚೂರು: ನಿರ್ಮಾಣ ಹಂತದ ನಾರಾಯಣಪುರ ಬಲದಂಡೆ ಕಾಲುವೆ ಒಡೆದು ನೂರಾರು ಎಕರೆ ಬೆಳೆ ನಾಶವಾದ ಘಟನೆ ಶನಿವಾರ ನಡೆದಿದೆ.

Advertisement

ರಾಯಚೂರು ತಾಲೂಕಿನ ಗೋನಾಳ ಗ್ರಾಮದ ಬಳಿ ಕಾಲುವೆ ಒಡೆದಿದ್ದು ಲಕ್ಷಾಂತರ ರೂ.ಮೌಲ್ಯದ ಬೆಳೆ ಹಾನಿಯಾಗಿದೆ.


ಭಾರೀ ಮಳೆ ಹಾಗೂ ಕಾಲುವೆಗೆ ಬಿಟ್ಟ ನೀರಿನಿಂದ ಅವಘಡ ಸಂಭವಿಸಿದೆ. ಹತ್ತಿ ತೊಗರಿ ಸೂರ್ಯಕಾಂತಿ ಬೆಳೆಹಾನಿಯಾಗಿದೆ.

ಕೊಟ್ಯಂತರ ರೂ.ವೆಚ್ಚದಲ್ಲಿ ಕಾಲುವೆ ನಿರ್ಮಿಸುತ್ತಿದ್ದು, ನಿರ್ಮಾಣ ಹಂತದಲ್ಲೇ ಕೊಚ್ಚಿ ಹೋಗಿರುವುದು ಅನುಮಾನಗಳಿಗೆ ಎಡೆ ಮಾಡಿದೆ. ಇಷ್ಟೆಲ್ಲ ಅವಾಂತರ ನಡೆದರೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next