Advertisement

ಕಾರ ಹುಣ್ಣಿಮೆ: ರೈತರಿಂದ ಎತ್ತುಗಳ ಶೃಂಗಾರ ಸಾಮಗ್ರಿ ಖರೀದಿ ಜೋರು

04:09 PM Jun 17, 2019 | Naveen |

ನಾರಾಯಣಪುರ: ಮುಂಗಾರು ಹಂಗಾಮು ಪ್ರವೇಶ ನಂತರ ಆಗಮಿಸುವ ಕಾರ ಹುಣ್ಣಿಮೆ ಹಬ್ಬವನ್ನು ಗ್ರಾಮೀಣ ಭಾಗದ ರೈತರು ವಿಶಿಷ್ಟವಾಗಿ ಆಚರಿಸುತ್ತಾರೆ.

Advertisement

ರೈತರ ಹಬ್ಬ ಎಂದು ಹೆಸರುವಾಸಿ ಯಾಗಿರುವ ಕಾರ ಹುಣ್ಣಿಮೆ ಹಬ್ಬದ ನಿಮಿತ್ತ ಎತ್ತುಗಳನ್ನು ಶೃಂಗರಿಸುವುದಕ್ಕೆ ಇಲ್ಲಿನ ವಾರದ ಸಂತೆ ದಿನ ರೈತರು ಎತ್ತುಗಳ ಶೃಂಗಾರದ ವಸ್ತುಗಳನ್ನು ಖರೀದಿಸುವ ಭರಾಟೆಯಲ್ಲಿ ತೊಡಗಿದ್ದು ಕಂಡು ಬಂತು.

ಮಳೆ ನಿರೀಕ್ಷೆ: ಮುಂಗಾರು ಮಳೆಯನ್ನು ನಂಬಿದ್ದ ರೈತ ಸಮೂಹ ಈಗ ಸುರಿದ ಅಲ್ಪ ಸ್ವಲ್ಪ ಮಳೆ ನೆಚ್ಚಿಕೊಂಡು ಜಮೀನುಗಳತ್ತ ಮುಖ ಮಾಡಿದ್ದಾರೆ.

ರೈತರು ಭೂಮಿ ಉಳಿಮೆ ಗೆಳೆಯರಾದ ಜೋಡೆತ್ತುಗಳನ್ನು ಹೂಡಿ ಭೂಮಿ ಹದಗೊಳಿಸಿ, ಗೊಬ್ಬರ ಮಿಶ್ರಣ ಮಾಡಿ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿ, ಆಕಾಶದತ್ತ ಮುಖ ಮಾಡಿ ವರುಣ ದೇವನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next